May 18, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-೨೦೨೦’ ಪುರಸ್ಕೃತ ಜಯಾ ಯಾಜಿ ನಿಧನ

ಭಟ್ಕಳ: ನಾಡಿನ ಹಿರಿಯ ಕಥೆಗಾರ್ತಿ ಜಯಾ ಯಾಜಿ ಶಿರಾಲಿ (೬೭) ಅವರು ಇಂದು ಮುಂಜಾನೆ ಭಟ್ಕಳದ ಶಿರಾಲಿಯ ಅವರ ಸ್ವಗೃಹದಲ್ಲಿ ನಿಧನರಾದರು.

ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ‘ಶಂಕ್ರಿ’, ‘ಅವಲೋಕನ, ‘ಗುಟ್ಟು ಗುಟ್ಟೇ’, ‘ಗಿಣಿಮರಿ’, ‘ಮಂದಹಾಸ’, ‘ಜಾಜಿ ಗಿಡದ ಗುಬ್ಬಿಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. ವಿವಾಹ ಪೂರ್ವದಲ್ಲಿ ‘ಜಯಾ ಭಟ್ಟ ಅಗಸೂರು’, ‘ಸಹ್ಯಾದ್ರಿ’ ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಅವರು ಬರಹಗಾರ ನಾರಾಯಣ ಯಾಜಿ ಅವರನ್ನು ಮದುವೆಯಾದ ನಂತರ ಜಯಾ ಯಾಜಿ ಶಿರಾಲಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು.

error: