May 18, 2024

Bhavana Tv

Its Your Channel

ಸಾನ್ವಿ ರಾವ್ ಏಕಪಾತ್ರಾಭಿನಯ ರಾಜ್ಯ ಮಟ್ಟಕ್ಕೆ ಆಯ್ಕೆ

ಹೊನ್ನಾವರ (ಡಿ೩೦): ದಿನಾಂಕ ೨೯.೧೨.೨೦೨೦ ರಂದು ಕರ್ನಾಟಕ ಸರ್ಕಾರದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ೨೦೨೦-೨೧ ಕಾರವಾರದ ಜಿಲ್ಲಾ ರಂಗಮoದಿರದಲ್ಲಿ ನಡೆದ ಏಕಪಾತ್ರಾಭಿನಯ (ಏಕಾಂಗಿ ನಾಟಕ) ಸ್ಪರ್ಧೆಯಲ್ಲಿ ಸಾನ್ವಿ ರಾವ್ ಜಿಲ್ಲೆ ಗೆ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಅಲ್ಲದೆ, ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿರುತ್ತಾಳೆ. ಇವಳು ಕೆನರಾ ಬ್ಯಾಂಕ್ ಸಿ.ಸಿ. ಹೊನ್ನಾವರ ಉದ್ಯೋಗಿ ಶ್ರೀ ಜಗದೀಶ್ ರಾವ ಹಾಗೂ ಐ ಟಿ ಐ ಉದ್ಯೋಗಿ ವಿನೂತ ಭಟ್ ಇವರ ಸುಪುತ್ರಿ, ಪ್ರಸ್ತುತ ಹೊನ್ನಾವರದ ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್ ನಲ್ಲಿ ೯ನೇ ತರಗತಿಯಲ್ಲಿ ಕಲಿಯುತ್ತಿರುವ ಹೆಮ್ಮೆಯ ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿರುತ್ತಾಳೆ.

error: