May 13, 2024

Bhavana Tv

Its Your Channel

ಭಾರತೀಯ ಜನತಾ ಪಾರ್ಟಿ ಹೊಳೆ ಆಲೂರ ಮಂಡಲದಿOದ ಕಾರ್ಯಕಾರಿಣಿ ಸಭೆ

ರೋಣ: ಭಾರತೀಯ ಜನತಾ ಪಾರ್ಟಿ ಹೊಳೆ ಆಲೂರ ಮಂಡಲದ ಕಾರ್ಯಕಾರಿಣಿ ಸಭೆಯು ಮಂಡಲ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ ಇವರ ಅಧ್ಯಕ್ಷತೆಯಲ್ಲಿ ಹೊಳೆಆಲೂರ ಗ್ರಾಮದಲ್ಲಿ ಜರುಗಿತು, ಈ ಕಾರ್ಯಾಗಾರದಲ್ಲಿ ನರಗುಂದ ಮತಕ್ಷೇತ್ರದ ಯುವ ಧುರೀಣರಾದ ಉಮೇಶಗೌಡ ಸಿ ಪಾಟೀಲ ಅವರು ಪಾಲ್ಗೊಂಡು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಸಹ ಪ್ರಭಾರಿ ನಾರಾಯಣ ಜಗತಾರಕರ್, ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಮಂಜುನಾಥ್ ಮೆಣಸಗಿ, ಗದಗ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಶೋಕ ಹೆಬ್ಬಳ್ಳಿ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವೀರಸಂಗಯ್ಯಾ ಮೂಕಾಸಿ, ನೀಲಪ್ಪಗೌಡ ದಾನಪ್ಪಗೌಡರ, ಮಂಡಲ ಕಾರ್ಯದರ್ಶಿ ಸೋಮು ಚರೇದ, ಹೊಳೆಆಲೂರ ಗ್ರಾ.ಪಂ. ಅಧ್ಯಕ್ಷರಾದ ಸಂಗಪ್ಪ ದುಗಲದ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶಾರದಾ ದಳವಾಯಿ, ಸುಮಂಗಲ ಕಾತರಕಿ ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: