May 13, 2024

Bhavana Tv

Its Your Channel

ಮೈಸೂರಿನ ಉದಯಗಿರಿಯಲ್ಲಿ ವಾಷಿಂಗ್ ಲಾಂಡ್ರಿ ನಡೆಸುತ್ತಿದ್ದ ಕೃಷ್ಣರಾಜಪೇಟೆ ತಾಲ್ಲೂಕಿನ ಶಂಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಂಡ್ಯ: ಮೈಸೂರಿನ ಉದಯಗಿರಿಯಲ್ಲಿ ವಾಷಿಂಗ್ ಲಾಂಡ್ರಿ ನಡೆಸುತ್ತಿದ್ದ ಕೃಷ್ಣರಾಜಪೇಟೆ ತಾಲ್ಲೂಕಿನ ಜಾಗಿನಕೆರೆಯ ಬೆಟ್ಟಶೆಟ್ಟರ ಅಳಿಯ ಶಂಕರ್ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಶಂಕರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.. ಸಂಸಾರದ ನಿರ್ವಹಣೆಗಾಗಿ ವಾಷಿಂಗ್ ಲಾಂಡ್ರಿ ಇಟ್ಟುಕೊಂಡು ಬಟ್ಟೆಗಳನ್ನು ಒಗೆದು ಐರನ್ ಮಾಡಿಕೊಟ್ಟು ಬಡಾವಣೆಯಲ್ಲಿ ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸಿ ಒಳ್ಳೆಯ ಹೆಸರು ಗಳಿಸಿದ್ದರು…ನಿನ್ನೆ ಪತ್ನಿ ಹಾಗೂ ಮಕ್ಕಳನ್ನು ತಮ್ಮ ಮಾವನವರ ಊರಾದ ಜಾಗಿನಕೆರೆಗೆ ಕಳಿಸಿಕೊಟ್ಟು ಮನೆಯಲ್ಲಿ ಯಾರೂ ಇಲ್ಲದ್ದಿದ್ದಾಗ ಶಂಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಮೈಸೂರಿನ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .

error: