May 14, 2024

Bhavana Tv

Its Your Channel

ಬ್ರೇಕಿಂಗ್ ಮಂಡ್ಯ..ಗ್ರಾಮ ಪಂಚಾಯತಿ ಪಾಲಿಟಿಕ್ಸ್ಗೆ ೧೫೦೦ ಕೋಳಿ ಮರಿಗಳು ಬಲಿ

ಕೃಷ್ಣರಾಜಪೇಟೆ ; ತಾಲ್ಲೂಕಿನ ಕಿಕ್ಕೇರಿ ಸಮೀಪದ ಸೊಳ್ಳೇಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಪಾಲಿಟಿಕ್ಸ್ಗೆ ೧೫೦೦ ಕೋಳಿ ಮರಿಗಳು ಬಲಿಯಾದ ಘಟನೆ ನಡೆದಿದೆ,

ಕಾಂಗ್ರೆಸ್ ಮುಖಂಡರಾದ ಸೊಳ್ಳೇಪುರ ಗ್ರಾಮದ ದೇವೇಗೌಡರ ಮಗ ಜಯರಾಮು ರವರಿಗೆ ಸೇರಿದ ಕೋಳಿ ಫಾರಂನಲ್ಲಿ
ಕೋಳಿ ಮರಿಗಳಿಗೆ ಆಹಾರದಲ್ಲಿ ವಿಷ ಹಾಕಿ ದುಷ್ಕರ್ಮಿಗಳು ಮರಿಗಳನ್ನು ಕೊಂದಿದ್ದಾರೆ, ಜಯರಾಮುರವರು ಸತತವಾಗಿ ಕಳೆದ ಮೂರು ಬಾರಿಯಿಂದಲೂ ಚುನಾವಣೆ ಎದುರಿಸಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕಿಕ್ಕೇರಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ, ಮತ್ತು ಉಪಾಧ್ಯಕ್ಷರಾಗಿದ್ದರು.
ಈ ದ್ವೇಶದಿಂದಲೆ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದೆ, ಚುನಾವಣಾ ಸಮೀಪದಲ್ಲಿದ್ದಾಗಲೇ ಈ ದುಶ್ಕೃತ್ಯ ನಡೆದಿದ್ದರಿಂದ ಅವರು ಅನುಮಾನ ಪಟ್ಟಿದ್ದಾರೆ,
ಸ್ಥಳಕ್ಕೆ ಕಿಕ್ಕೇರಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ….

error: