April 29, 2024

Bhavana Tv

Its Your Channel

ಸಚಿವ ನಾರಾಯಣಗೌಡರ ಬಗ್ಗೆ ಲಘುವಾಗಿ ಮಾತನಾಡಿದ ದಳಪತಿಗಳ ವಿರುದ್ಧ ಬಿಜೆಪಿ ಮಹಿಳಾ ಮುಖಂಡರ ಆಕ್ರೋಶ

ಕೆ.ಆರ್.ಪೇಟೆ :- ಪುರಸಭೆ ಸದಸ್ಯ ಸಂತೋಷ್ ಗೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ, ಸಚಿವರ ವಿರುದ್ದ ನಾಲಿಗೆ ಹರಿಬಿಟ್ಟು ನೀಡಿರುವ ಬಾಲಿಶ ಹೇಳಿಕೆಗಳಿಗೆ ಬೆಲೆಯಿಲ್ಲ, ಇದೇ ಚಾಳಿ ಮುಂದುವರೆಸಿದರೆ ಘೇರಾವ್ ಮಾಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ತಾಲ್ಲೂಕು ಬಿಜೆಪಿ ಮಹಿಳಾ ಮುಖಂಡರು ..

ಉಪ ಚುನಾವಣೆಯ ಸಂದರ್ಭದಲ್ಲಿ ಚಪ್ಪಲಿಯಲ್ಲಿ ಹೊಡೆಸಿ ಶಾಸಕರನ್ನಾಗಿ ಮಾಡಿ ಮಂತ್ರಿಗಳಾಗಲು ಸಹಕಾರ ನೀಡಿದಿರಿ, ಈಗ ಕ್ರಿಯಾಶೀಲ ಸಚಿವರಾಗಿ ಕೆಲಸ ಮಾಡುತ್ತಾ ಕರ್ನಾಟಕ ರಾಜ್ಯದ ರೇಷ್ಮೆ ಬೆಳೆಗೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಜಾಗತಿಕ ಮಾರುಕಟ್ಟೆ ದೊರಕಿಸಿಕೊಟ್ಟ, ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟ ನಡೆಸಿ ಇತಿಹಾಸ ನಿರ್ಮಿಸಿರುವ ಸಚಿವರ ಅಭಿವೃದ್ಧಿ ಸಹಿಸದೇ ಇಲ್ಲಸಲ್ಲದ ಅಪಪ್ರಚಾರ ಮಾಡ್ತಿದ್ದೀರ, ನಾರಾಯಣಗೌಡರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ದಳಪತಿಗಳೇ … ನೀವೆಲ್ಲರೂ ನಾರಾಯಣಗೌಡರಿಂದ ಅನುಕೂಲ ಪಡೆದಿರುವ ಫಲಾನುಭವಿಗಳಾಗಿದ್ದೀರಿ ಎಂದು ಕೆ.ಆರ್.ಪೇಟೆ ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾಮುರಳಿ ಆಕ್ರೋಶ ವ್ಯಕ್ತಪಡಿಸಿದರು ..

ಕೆ.ಆರ್.ಪೇಟೆ ಪುರಸಭೆ ಸದಸ್ಯರಾಗಿ ಆಡಳಿತ ನಡೆಸಲು ವಿಫಲರಾಗಿರುವ ಸಂತೋಷ್ ಗೆ ಭಾಷಾ ಜ್ಞಾನವೇ ಗೊತ್ತಿಲ್ಲ, ಎಲುಬಿಲ್ಲದ ನಾಲಿಗೆಯನ್ನು ತಮ್ಮ ಮನಸೋಇಚ್ಛೆ ಹರಿಬಿಟ್ಟಿದ್ದಾರೆ. ರಾಜ್ಯದ ಒಬ್ಬ ಜವಾಬ್ದಾರಿ ಸಚಿವರ ವಿರುದ್ಧ ಲಘುವಾಗಿ ಮಾತನಾಡಿರುವ ಸಂತೋಷ್ ನೀಡಿರುವ ಬಾಲಿಷ ಹೇಳಿಕೆಗಳಿಗೆ ಬೆಲೆಯಿಲ್ಲ, ಅಸಮರ್ಥವಾಗಿ ಕೆಲಸ ಮಾಡಿ ಯುವ ಜೆಡಿಎಸ್ ಅಧ್ಯಕ್ಷ ಹುದ್ದೆಯಿಂದ ಪದಚ್ಯುತರಾಗಿರುವ ಸಂತೋಷ್ ಸಚಿವರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು, ಇಲ್ಲದಿದ್ದರೆ ಬಿಜೆಪಿ ಮಹಿಳಾ ಘಟಕದ ವತಿಯಿಂದ ಸಂತೋಷ್ ಗೆ ಘೇರಾವ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಲತಾಮುರಳಿ ಎಚ್ಚರಿಕೆ ನೀಡಿದರು .

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಮಹಿಳಾ ಮುಖಂಡರಾದ ಕತ್ತರಘಟ್ಟ ಮಂಜುಳಾ, ಹೊಸಹೊಳಲು ಜಯಮ್ಮ, ಹೆಗ್ಗಡಹಳ್ಳಿ ಲಕ್ಷಮ್ಮ, ಮತ್ತಿಘಟ್ಟ ಲತಾ, ನಂದಿನಿ, ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು .

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ , ಮಂಡ್ಯ

error: