May 2, 2024

Bhavana Tv

Its Your Channel

ಅನಾಥರು ಹಾಗೂ ವೃದ್ಧರೊಂದಿಗೆ ಮಾತೃಭೂಮಿ ಅನಾಥಾಶ್ರಮದಲ್ಲಿ ಸಸಿನೆಟ್ಟು ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ವಿಶ್ರಾಂತ ಸೈನಿಕ ಮಿಲ್ಟ್ರಿ ಸುಕುಮಾರ್ ..

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯ ಸಾಧುಗೋನಹಳ್ಳಿಯಲ್ಲಿರುವ ಮಾತೃಭೂಮಿ ಅನಾಥರ ವೃದ್ಧಾಶ್ರಮದಲ್ಲಿ ಸಸಿನೆಟ್ಟು ನೀರೆರೆದು ಅನಾಥರಿಗೆ ಊಟ ನೀಡುವ ಮೂಲಕ ನಿವೃತ್ತ ಸೈನಿಕರಾದ ಸುಕುಮಾರ್ ತಮ್ಮ ಹುಟ್ಟು ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದರು …

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸೇವೆ ಎಂಬ ಪದವು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ತೋರಿಕೆಗಾಗಿ ಆಡಂಬರದಿAದ ಕಟೌಟ್ ಫ್ಲೆಕ್ಸ್ ಹಾಕಿಸಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವ ಇಂದಿನ ಸಮಾಜದಲ್ಲಿ ಅನಾಥರೊಂದಿಗೆ ಊಟ ಮಾಡಿ, ಸಸಿ ನೆಟ್ಟು ನೀರೆರೆಯುವ ಮೂಲಕ ವಿಶ್ರಾಂತ ಸೈನಿಕರಾದ ಸುಕುಮಾರ್ ಅವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೆ.ಆರ್.ಪೇಟೆ ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವೇಗೌಡ ಗುಣಗಾನ ಮಾಡಿದರು..

ಮಾತೃಭೂಮಿ ಅನಾಥಾಶ್ರಮದ ವ್ಯವಸ್ಥಾಪಕ ನಾಗಣ್ಣ, ಸಮಾಜ ಸೇವಕರಾದ ಎಲ್.ಐ.ಸಿ ಕೆ.ಎಸ್.ಸುರೇಶ್ ಕುಮಾರ್, ಶಶಿಕುಮಾರ್, ಸೈಯ್ಯದ್ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ, ಮಂಡ್ಯ

error: