ಕೃಷ್ಣರಾಜಪೇಟೆ :- ಭಿಕ್ಷಕಿಯರು ಹಾಗೂ ನಿರ್ಗತಿಕ ಮಹಿಳೆಯರಿಗೆ ಸೀರೆ, ಬಳೆ ಸೇರಿದಂತೆ ಅರಿಶಿನಕುಂಕುಮದ ಬಾಗಿನ ನೀಡಿ ಗೌರಿ ಹಬ್ಬಕ್ಕೆ ಶುಭ ಹಾರೈಸಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಮುಖಿ ದೇವಿಕಾ …
ಮೈಸೂರು ಜಿಲ್ಲೆಯ ಸಾಲಿಗ್ರಾಮ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಮಂಗಳಮುಖಿ ದೇವಿಕಾ ಇಂದು ಕೆ.ಆರ್.ಪೇಟೆ ಸಂತೆಯಲ್ಲಿ ಭಿಕ್ಷಾಟನೆ ಕಾರ್ಯಮುಗಿಸಿ ನೂರಾರು ಭಿಕ್ಷಕಿಯರು ಹಾಗೂ ನಿರ್ಗತಿಕ ಮಹಿಳೆಯರಿಗೆ ಗೌರಿಹಬ್ಬದ ಕೊಡುಗೆಯಾಗಿ ಸೀರೆ ಸೇರಿದಂತೆ ಬಳೆಗಳು ಹಾಗೂ ಅರಿಶಿನಕುಂಕುಮದ ಬಾಗಿನ ನೀಡಿ ಶುಭ ಹಾರೈಸಿದರು..
ಸ್ವತಃ ಭಿಕ್ಷುಕಿಯಾಗಿರುವ ಮಂಗಳಮುಖಿ ದೇವಿಕಾ ಭಿಕ್ಷೆ ಬೇಡಿ ಜೀವನ ನಡೆಸಿದರೂ ತನ್ನಂತೆಯೇ ಸಂಕಷ್ಠದಲ್ಲಿರುವ ನೂರಾರು ಅನಾಥರು ಹಾಗೂ ಮಹಿಳಾ ಭಿಕ್ಷುಕಿಯರಿಗೆ ಸೀರಿಯ ಭಾಗಿನ ನೀಡಿ ಸಂತೋಷದಿAದ ಹೊಸಸೀರೆ ಉಟ್ಟು ಗೌರಿ ಹಬ್ಬವನ್ನು ಆಚರಿಸುವಂತೆ ಶುಭ ಹಾರೈಸಿದರು..
ಮಂಗಳಮುಖಿ ದೇವಿಕಾ ಅವರ ಸಮಾಜಮುಖಿ ಕಾರ್ಯವನ್ನು ಸಂತೆಗೆ ಆಗಮಿಸಿದ್ದ ನಾಗರೀಕರು ಹಾಗೂ ವರ್ತಕರು ಶ್ಲಾಘಿಸಿ ಅಭಿನಂದಿಸಿದರು…
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ .
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ