April 29, 2024

Bhavana Tv

Its Your Channel

“ರಾಯಲ್ ಕಂಫರ್ಟ್ಸ್ ಫ್ಯಾಮಿಲಿ ರೆಸ್ಟೋರೆಂಟ್” ಉದ್ಘಾಟಿಸಿದ ಸಚಿವ ನಾರಾಯಣಗೌಡ

ಕೆ.ಆರ್.ಪೇಟೆ ಹೊರವಲಯದ ಚನ್ನರಾಯಪಟ್ಟಣ ರಸ್ತೆಯಲ್ಲಿ ಯುವ ಉದ್ಯಮಿ ಲಕ್ಷ್ಮಣಗೌಡ ಅವರ ಮಾಲೀಕತ್ವದ “ರಾಯಲ್ ಕಂಫರ್ಟ್ಸ್ ಫ್ಯಾಮಿಲಿ ರೆಸ್ಟೋರೆಂಟ್” ಆರಂಭ..ಸಚಿವ ನಾರಾಯಣಗೌಡ ಅವರಿಂದ ಗ್ರಾಹಕರಿಗಾಗಿ ನೂತನ ಹೋಟೆಲ್ ಲೋಕಾರ್ಪಣೆ .. ಶುಭ ಹಾರೈಸಿದ ಗಣ್ಯರು ..

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಗ್ರಾಮದ ಬಳಿ ಚನ್ನರಾಯಪಟ್ಟಣ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಮುಂಬೈ ಉದ್ಯಮಿ ಲಕ್ಷ್ಮಣಗೌಡ ಅವರು ನೂತನವಾಗಿ ಆರಂಭಿಸಿರುವ ರಾಯಲ್ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಸಚಿವ ಡಾ.ನಾರಾಯಣಗೌಡ ಲೋಕಾರ್ಪಣೆ ಮಾಡಿ ಹೋಟೆಲ್ ವ್ಯವಸ್ಥಾಪಕಿ ದಿವ್ಯ ಅವರಿಗೆ ಶುಭ ಹಾರೈಸಿದರು…

ಕೃಷ್ಣರಾಜಪೇಟೆ ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಪುರಾಣ ಪ್ರಸಿದ್ಧವಾದ ಭೂವರಹನಾಥಸ್ವಾಮಿ ದೇವಾಲಯಕ್ಕೆ ಬರುವ ಭಕ್ತರು ಹಾಗೂ ಯಾತ್ರಾರ್ಥಿಗಳ ಸಂಖ್ಯೆಯು ಹೆಚ್ಚಾಗಿರುವುದರಿಂದ ಕೆ.ಆರ್.ಪೇಟೆ ಪಟ್ಟಣದಲ್ಲಿ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕೆ, ಊಟ ವಸತಿಗೆ ರಾಯಲ್ ಕಂಫರ್ಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಹೇಳಿ ಮಾಡಿಸಿದಂತಿದೆ. ಪ್ರವಾಸಿಗರಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹೈಟೆಕ್ ಆಗಿ ನಿರ್ಮಾಣವಾಗಿರುವ ಹೋಟೆಲ್ ಮೈಸೂರು-ಬೆಂಗಳೂರು ಮಹಾನಗರದಲ್ಲಿ ದೊರೆಯುವ ಸೌಲಭ್ಯ ಹಾಗೂ ಆತಿಥ್ಯವು ಕೆ.ಆರ್.ಪೇಟೆಯಲ್ಲಿಯೇ ದೊರೆಯಲಿದೆ. ಆದ್ದರಿಂದ ಪ್ರವಾಸಿಗರು ಸ್ಪರ್ಧಾತ್ಮಕ ದರದಲ್ಲಿ ಸೌಲಭ್ಯಗಳನ್ನು ನೀಡಲು ಆರಂಭ ಮಾಡಿರುವ ರಾಯಲ್ ಹೋಟೆಲ್ ನ ಸದ್ಬಳಕೆ ಮಾಡಿಕೊಂಡು ಅನುಕೂಲ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು..

ಕೆ.ಆರ್.ಪೇಟೆ ಪಟ್ಟಣದಲ್ಲಿ ರಾಯಲ್ ಕಂಫರ್ಟ್ಸ್ ಹೆಸರಿನಲ್ಲಿ ಅತ್ಯಂತ ಸುಸಜ್ಜಿತವಾದ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಆರಂಭಿಸಿರುವ ಉಧ್ಯಮಿ ಲಕ್ಷ್ಮಣಗೌಡ ಹಾಗೂ ಹೋಟೆಲ್ ವ್ಯವಸ್ಥಾಪಕಿ ವಿದ್ಯಾ ಅವರಿಗೆ ಸಚಿವ ನಾರಾಯಣಗೌಡ ಶುಭ ಕೋರಿದರು..

ರಾಯಲ್ ಕಂಫರ್ಟ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಖ್ಯಾತ ಹಾಸ್ಯನಟ ಮಿತ್ರ, ಚಲನಚಿತ್ರ ನಿರ್ದೇಶಕ ಗುಬ್ಬಿ ರವಿವರ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಪುರಸಭಾ ಸದಸ್ಯರಾದ ಬಸ್ ಸಂತೋಷ್ ಕುಮಾರ್, ಉಧ್ಯಮಿ ಕೆ.ಆರ್.ಹೇಮಂತಕುಮಾರ್, ಪಿ.ಕೆ.ಜಯಕೃಷ್ಣೇಗೌಡ, ಬಸ್ ಕೃಷ್ಣೇಗೌಡ, ರೇಷ್ಮೆ ಕೃಷಿತಜ್ಞ ಟಿ.ಬಲ್ಲಯ್ಯ, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುನಿಲ್, ತಾಲ್ಲೂಕು ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷೆ ಚಂದ್ರಕಲಾ, ಕುಮಾರ್ ಟೆಕ್ಸ್ ಟೈಲ್ಸ್ ಕುಮಾರ್ ಸೇರಿದಂತೆ ನೂರಾರು ಜನರು ಭಾಗವಹಿಸಿ ನೂತನ ಉಧ್ಯಮಕ್ಕೆ ಶುಭ ಹಾರೈಸಿದರು..

ವರದಿ.ಡಾ.ಕೆ.ಆರ್.ನೀಲಕಂಠ
ಕೃಷ್ಣರಾಜಪೇಟೆ , ಮಂಡ್ಯ

error: