ಕೆ.ಆರ್.ಪೇಟೆ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮಾನಸ ಫ್ಯಾಮಿಲಿ ಶಾಪ್ ವಾರ್ಷಿಕೋತ್ಸವದ ಅಂಗವಾಗಿ ನಡೆದ ಲಕ್ಕಿಡಿಫ್ ಕಾರ್ಯಕ್ರಮವನ್ನು ತಹಶೀಲ್ದಾರ್ ಎಂ.ವಿ.ರೂಪ ನಡೆಸಿಕೊಟ್ಟು ಅಧೃಷ್ಟಶಾಲಿಗಳಿಗೆ ಶುಭ ಹಾರೈಸಿದರು..
ಮಕ್ಕಳು, ಯುವಜನರು, ಮಹಿಳೆಯರು ಸೇರಿದಂತೆ ಗುಣಮಟ್ಟದ ರೆಡಿಮೇಡ್ ಬಟ್ಟೆಗಳು ಹಾಗೂ ಕಾಂಜೀವರA, ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿರುವ ಮಾನಸ ಫ್ಯಾಮಿಲಿ ಶಾಫ್ ಕೇವಲ ಒಂದು ವರ್ಷದಲ್ಲಿ ಅತ್ಯದ್ಬುತವಾದ ಸಾಧನೆಯನ್ನು ಮಾಡಿ ಸ್ಪರ್ಧಾತ್ಮಕ ದರದಲ್ಲಿ ಶ್ರೇಷ್ಠ ಗುಣಮಟ್ಟದ ಬಟ್ಟೆಗಳನ್ನು ಗ್ರಾಹಕರಿಗೆ ನೀಡಿ ತಾಲ್ಲೂಕಿನ ಜನತೆಯ ಮನಸ್ಸನ್ನು ಗೆದ್ದಿದೆ. ವಾರ್ಷಿಕೋತ್ಸವದ ಅಂಗವಾಗಿ ನಡೆದ ಲಕ್ಕಿಡಿಫ್ ಅದೃಷ್ಟ ಪರೀಕ್ಷೆಯಲ್ಲಿ ವಿಜೇತರಾದ ಗ್ರಾಹಕರಿಗೆ ರೆಫ್ರಿಜರೇಟರ್, ವಾಷಿಂಗ್ ಮಿಷೀನ್, ಎಲ್ ಇಡಿ ಟಿವಿ, ಮಿಕ್ಸರ್ ಗ್ರೈಂಡರ್, ಪ್ರೆಸ್ಟೀಜ್ ಕುಕ್ಕರ್ ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು..
ತಹಶೀಲ್ದಾರ್ ರೂಪ ಮಾತನಾಡಿ ಮಾನಸ ಫ್ಯಾಮಿಲಿ ಶಾಪ್ ಕೆ.ಆರ್.ಪೇಟೆ ಪಟ್ಟಣದಲ್ಲಿ ಆರಂಭವಾದ ನಂತರ ಜವಳಿ ಹಾಗೂ ಮಕ್ಕಳ ಬಟ್ಟೆಗಳ ಖರೀದಿಗೆ ಮೈಸೂರು, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಿದೆ. ಸ್ಪರ್ಧಾತ್ಮಕ ದರದಲ್ಲಿ ರೆಡಿಮೇಡ್ ಬಟ್ಟೆಗಳನ್ನು ನೀಡುತ್ತಿರುವ ಮಾನಸ ಫ್ಯಾಮಿಲಿ ಶಾಪ್ ತಾಲ್ಲೂಕಿನ ಜನತೆಯ ಮನಸ್ಸನ್ನು ಗೆಲ್ಲುವ ಜೊತೆಗೆ ಚನ್ನರಾಯಪಟ್ಟಣ, ಕೆ.ಆರ್.ನಗರ, ಹೊಳೆನರಸೀಪುರ, ನಾಗಮಂಗಲ, ಪಾಂಡವಪುರ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಗ್ರಾಹಕರು ಬರುತ್ತಿದ್ದಾರೆ. ಕೆ.ಆರ್.ಪೇಟೆ ತಾಲ್ಲೂಕಿನ ಗ್ರಾಹಕರ ಮನಗೆದ್ದಿರುವ ಮಾನಸ ಸಂಸ್ಥೆಯು ಬೆಳೆದು ಹೆಮ್ಮರವಾಗಲಿ ಎಂದು ಶುಭ ಹಾರೈಸಿದರು…
ಇದೇ ಸಂದರ್ಭದಲ್ಲಿ ಗ್ರಾಹಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು..ಕಾರ್ಯಕ್ರಮದಲ್ಲಿ ತಾಲ್ಲೂಕು ವಿತರಕರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ರಾಜೇಶ್, ಉಧ್ಯಮಿ ಕೆ.ಎನ್.ರಮೇಶ್, ತಾಲ್ಲೂಕು ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷೆ ಬಿ.ಎಲ್.ಚಂದ್ರಕಲಾ, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ ಸೇರಿದಂತೆ ನೂರಾರು ಗ್ರಾಹಕರು ಹಾಗೂ ಮಾನಸ ಫ್ಯಾಮಿಲಿ ಶಾಫ್ ನ ಸಿಬ್ಬಂಧಿಗಳು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ
More Stories
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ
ದೇವಿರಮ್ಮಣ್ಣೆ ಕೆರೆ ಅಂಗಳಕ್ಕೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ರೈತ ಬಾಂಧವರು