May 14, 2024

Bhavana Tv

Its Your Channel

ಪುರಸಭೆ ಸದಸ್ಯರೊಂದಿಗೆ ಮತ ಚಲಾಯಿಸಿದ ಶಾಸಕ ಸುರೇಶಗೌಡ

ನಾಗಮಂಗಲ .ಮಂಡ್ಯ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಲು ಪುರಸಭೆ ಸದಸ್ಯರೊಂದಿಗೆ ಆಗಮಿಸಿದ ಶಾಸಕ ಸುರೇಶ್ ಗೌಡ. ಮತಚಲಾಯಿಸಿ ನಮ್ಮ ಜೆಡಿಎಸ್ ಅಭ್ಯರ್ಥಿ ಎರಡನೇ ಬಾರಿ ಗೆಲುವು ಖಚಿತ ಎಂದು ಸದಸ್ಯರೊಂದಿಗೆ ಗೆಲುವಿನ ಚಿಹ್ನೆತೋರಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು

ಮತದಾನದ ನಂತರ ಶಾಸಕ ಸುರೇಶ್ ಗೌಡ ಮಾತನಾಡಿ, ಅಪ್ಪಾಜಿಗೌಡರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿಗಳ ಕುತಂತ್ರಗಳ ನಡುವೆಯೂ ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡರ ಪರವಾಗಿ ವಾತಾವರಣವಿದೆ.೭೦೦ ರಿಂದ ೮೦೦ ಮತಗಳ ಅಂತರದಲ್ಲಿ ಅಪ್ಪಾಜಿಗೌಡರ ಗೆಲುವು ನಿಶ್ಚಿತ. ಬಿಜೆಪಿ ಜೊತೆ ಮೈತ್ರಿ ಕೇವಲ ಊಹಪೋಹಾ. ಜೆಡಿಎಸ್ ಮತದಾರರು ಮಾತ್ರವಲ್ಲದೆ ಕಾಂಗ್ರೆಸ್ ಹಾಗೂ ಪಕ್ಷೇತರ ಮತದಾರರು ನಮಗೆ ಮತ ಹಾಕುತ್ತಿದ್ದಾರೆ.ಯಾರ ಅಭಯ ಹಸ್ತದ ಅವಶ್ಯಕತೆ ನಮಗಿಲ್ಲ, ನಮ್ಮ ಪಕ್ಷದ ಮತದಾರರೇ ಹೆಚ್ಚಿದ್ದಾರೆ ಎಂದು ವಿಶ್ವಾಸ ವ್ತಕ್ತಪಡಿಸಿದರು.

ವರದಿ:ಚಂದ್ರಮೌಳಿ ನಾಗಮಂಗಲ

error: