April 28, 2024

Bhavana Tv

Its Your Channel

ನನ್ನ ಸೋಲಿನ ಕಹಿ ಮರೆಯುವ ದಿನ ಸಮೀಪಿಸಿದೆ -ಮಾಜಿ ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ಶಾಸಕ ಚಲುವರಾಯಸ್ವಾಮಿ ಸ್ವ ಗ್ರಾಮದಲ್ಲಿ ಇಜ್ಜಲಘಟ್ಟದಲ್ಲಿ ಚಾಲನೆ ನೀಡಿದರು

ರಾಷ್ಟ್ರ ಮುಖಂಡರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ರವರು ಗ್ರಾಮಮಟ್ಟದಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಹಿರಿಯ ಮುಖಂಡರು ಎಲ್ಲರೂ ಒಗ್ಗೂಡಿ ಈ ದಿನ ೨೫ ಲಕ್ಷ ಸದಸ್ಯರ ನೊಂದಾಯಿಸಲು ಗುರಿ ಹೊಂದಿದೆ ಎಂದರು

ಭಾರತದ ಇತಿಹಾಸದಲ್ಲಿ ಸ್ವಾತಂತ್ರ‍್ಯಕ್ಕೆ ಹೋರಾಟ ಮಾಡಿದ ಏಕೈಕ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ ಇನ್ನು ಯಾವುದೇ ಪಕ್ಷಕ್ಕೂ ಇತಿಹಾಸ ಇರುವುದಿಲ್ಲ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಯುವಕರಿಗೆ ಮತ್ತು ಮಹಿಳೆಯರಿಗೆ ಜನಪರವಾದ ಯೋಜನೆಗಳನ್ನು ನೀಡಿರುವುದು ನಮ್ಮ ಪಕ್ಷ ಎಂಬುದು ಹೆಮ್ಮೆಯ ವಿಚಾರ

ವಿಧಾನ ಪರಿಷತ್ ಚುನಾವಣೆ ಸಂಬoಧಪಟ್ಟoತೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರಬಹುದು ಆದರೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ಗುಳಿಗೌಡರ ಗೆಲ್ಲಲು ಮತ ನೀಡಿ ಸಹಕಾರ ನೀಡಿದ್ದಾರೆ ಈ ಗೆಲುವಿನಿಂದ ನನ್ನ ಸೋಲಿನ ಕಹಿ ದಿನವನ್ನು ಮರೆಯುವ ದಿನ ಬಂದಿದೆ ಎಂದರು ಇದರ ಫಲಿತಾಂಶ ೧೪ನೇ ತಾರೀಕು ಮಂಡ್ಯ ಜನತೆಗೆ ತಿಳಿಯುತ್ತದೆ ಎಂದರು

ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಕೆ.ಪಿ.ಸಿಸಿ ಗುರುಸ್ವಾಮಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೊಣನೂರು ಹನುಮಂತು ಮುಖಂಡರಾದ ನಾಗನಹಳ್ಳಿ ರಾಜೇಶ್ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರು.ನಾಗಣ್ಣ. ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: