May 14, 2024

Bhavana Tv

Its Your Channel

ಹುಟ್ಟುಹಬ್ಬದಂದು ರಕ್ತದಾನ ಮಾಡಿದ ಶಾಸಕ ಸುರೇಶ್ ಗೌಡ

ನಾಗಮಂಗಲ:-ಜೆ.ಡಿ.ಎಸ್. ಶಾಸಕ ಸುರೇಶ್ ಗೌಡ ಜನುಮದಿನದ ಅಂಗವಾಗಿ ಅಭಿಮಾನಿಗಳು ಮತ್ತು ಜಾತ್ಯತೀತ ಜನತಾದಳದ ಕಾರ್ಯಕರ್ತರು ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಶಾಸಕ ಸುರೇಶಗೌಡ ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು

ಶಾಸಕ ಸುರೇಶ್ ಗೌಡ ಮಾತನಾಡಿ ಕರೋನಾ ಮಹಾಮಾರಿ ವೈರಸ್ ಎಲ್ಲೆಡೆ ಹರಡಿದೆ ಆದ್ದರಿಂದ ಸರಳವಾಗಿ ಈ ದಿನ ನನ್ನ ಸ್ವಗೃಹದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದೆನೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಈ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ರಕ್ತದಾನ ಶಿಬಿರ ಪ್ರಮುಖವಾಗಿದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಲಿAಗೇಗೌಡ ಮಾತನಾಡಿ ಇಂದು ಪಟ್ಟಣದ ಕೋಟೆಬೆಟ್ಟ ರಸ್ತೆಯಲ್ಲಿರುವ ನಿವಾಸದ ಬಳಿ ಅಭಿಮಾನಿಗಳು ಹಾಗೂ ಜೆ.ಡಿ.ಎಸ್. ಕಾರ್ಯಕರ್ತರು ರಕ್ತದಾನ ಶಿಬಿರವನ್ನು ನಮ್ಮ ನೆಚ್ಚಿನ ನಾಯಕರಾದ ಶಾಸಕ ಸುರೇಶ್ ಗೌಡರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದೇವೆ ಈ ಶಿಬಿರದಲ್ಲಿ ಸ್ವಯಂ ಶಾಸಕರಾದ ಸುರೇಶ್ ಗೌಡ ರವರು ರಕ್ತದಾನ ಮಾಡಿ ಯುವ ಜನತೆಗೆ ಮಾದರಿಯಾಗಿದ್ದಾರೆ ಶಾಸಕರ ಸಮಾಜಕ್ಕೆ ಮಾದರಿಯಾಗುವ ನಿರ್ಧಾರದಿಂದ ಹಲವಾರು ಯುವಕರು ಇಂದು ರಕ್ತದಾನ ಮಾಡಿದ್ದಾರೆ ರಕ್ತದಾನ ಶಿಬಿರ ಈ ದಿನ ಪೂರ್ತಿ ಇರಲಿದ್ದು ನೂರಕ್ಕೂ ಹೆಚ್ಚು ಜನ ಯುವಕರು ಭಾಗವಹಿಸಲಿದ್ದಾರೆ ಎಂದರು

ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಸುರೇಶ್ ಗೌಡ ಅಭಿಮಾನಿಗಳು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: