May 2, 2024

Bhavana Tv

Its Your Channel

ಉಡುಪಿ ಜಿಲ್ಲೆಯಲ್ಲೊಂದು “ಅಕ್ಷರ ಜೋಳಿಗೆ” ಎನ್ನುವ ವಿಶೇಷ ಕಾರ್ಯಕ್ರಮ

ಉಡುಪಿ: ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಎನ್. ಎಚ್. ನಾಗೂರು ಡಿ.ಡಿ. ಪಿಐ ಅವರು ನಾವು ನಮ್ಮ ಜಿಲ್ಲೆಯಲ್ಲಿ ಅಕ್ಷರ ಜೋಳಿಗೆ ಎಂಬ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದೇವೆ, ಪಾಲಕರು , ಸಾರ್ವಜನಿಕರ ಮನೆಯಲ್ಲಿ ಇರತಕ್ಕಂತಹ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಶಾಲಾ ವಾಚನಾಲಯಕ್ಕೆ ಮತ್ತು ಸಾರ್ವಜನಿಕ ವಾಚನಾಲಯಕ್ಕೆ ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಶಾಲೆಯ ಶಿಕ್ಷಕರು ಸಹಕರಿಸುತ್ತಿದ್ದಾರೆ .ವಾರದಲ್ಲಿ ಒಂದು ದಿನ ಶಾಲಾ ಅವಧಿ ಗಿಂತ ಮುಂಚೆ ಪಾಲಕರ ಮನೆಗೆ ಹೋಗಿ ಪಾಲಕರ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಸಂಗ್ರಹಿಸುವ ಕಾರ್ಯಕ್ರಮವೇ ಅಕ್ಷರ ಜೋಳಿಗೆ.

ವರದಿ:ಅರುಣ ಭಟ್ ಕಾರ್ಕಳ

error: