ಕುಂದಾಪುರ: ಲಾಡ್ಜ್ ಒಂದರಲ್ಲಿ ಕುಳಿತು ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಬೈಂದೂರು ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬ್ರಹ್ಮಾವರ ಮಟಪಾಡಿ ನಿವಾಸಿ ಯೋಗೇಶ್ ಗಾಣಿಗ (24), ಕೇರಳ ತಿರುವನಂತಪುರ ನಿವಾಸಿ ಯದುನಾರಾಯಣ (21), ಬೈಂದೂರು ಬಿಜೂರು ನಿವಾಸಿ ಗುರುರಾಜ ಪೂಜಾರಿ (25), ಉಪ್ಪುಂದ ನಿವಾಸಿ ಸುನೀಲ್ ಪೂಜಾರಿ ಮತ್ತು ಬಿಜೂರು ನಿವಾಸಿ ರವಿ(25) ಎಂದು ಗುರುತಿಸಲಾಗಿದೆ.
ಸಪ್ಟೆಂಬರ್ 2 ರಂದು ಬೆಳಗಿನ ಜಾವ 3 ಗಂಟೆಗೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸುರೇಶ ಜಿ ನಾಯಕ್ ಅವರಿಗ ಬಂದ ಮಾಹಿತಿ ಮೇರೆಗೆ ಲಾಡ್ಜ್ ಒಂದಕ್ಕೆ ದಾಳಿ ನಡೆಸಿ ರೂಮ್ ಒಂದರಲ್ಲಿ ಗಾಂಜಾ ಸೇವಿಸುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಆರೋಪಿ ಯೋಗೇಶ್ ಗಾಣಿಗ ಎಂಬಾತನ ಬ್ಯಾಗಿನಲ್ಲಿ 40 ಗ್ರಾಂ ಗಾಂಜಾ ದೊರೆತಿದ್ದು ಇದನ್ನು ಶಬ್ಬೀರ್ ಭಟ್ಕಳ ಎಂಬಾತನು ಸರಬರಾಜು ಮಾಡುವುದಾಗಿ ಆಪಾದಿತನು ತಿಳಿಸಿದ್ದು, ಬ್ಯಾಗ್ ನಿಂದ OCB Slim premium ಎಂಬ ಹೆಸರಿನ ಗಾಂಜಾ ಸೇದಲು ಬಳಸುವ ಪೇಪರ್ ಪೀಸ್ -14, ಮಿಲಿಟರಿ ಸಮವಸ್ತ್ರದ ಡಿಸೈನ್ ನ ಜಿಪ್ ಇರುವ ಬ್ಯಾಗ್ ಒಂದನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಆರೋಪಿಗಳಿಂದ 6 ಮೊಬೈಲ್ ಫೊನ್, 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಸ್ವಾಧೀನಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 1,71,500 ಆಗಿರುತ್ತದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ