May 12, 2024

Bhavana Tv

Its Your Channel

ಕಾರ್ಕಳ; ಅಪರಾಧ ತಡೆ ಮಾಸಾಚರಣೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕಾನೂನುಗಳ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ ಠಾಣೆಯ ಎ.ಎಸ್.ಐ.ಯವರಾದ ನಾಗೇಶ್ ಇವರು ವಿದ್ಯಾರ್ಥಿಗಳೊಡನೆ ಸಂವಾದ ಮಾಡುತ್ತಾ ಪೊಲೀಸರ ಮಹತ್ವದ ಕಾರ್ಯವನ್ನು ತಿಳಿಸುತ್ತಾ ಫೋಕ್ಸೋ ಕಾಯಿದೆ, ಬಾಲ ಕಾರ್ಮಿಕ, ಮಕ್ಕಳ ಅಪಹರಣ, ಬಾಲ್ಯವಿವಾಹ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ ಇವುಗಳ ಬಗ್ಗೆ ಬೆಳಕು ಚೆಲ್ಲುತ್ತಾ ಇದರ ಇತಿ ಮಿತಿಗಳ ಬಗ್ಗೆ ತಿಳಿಸಿದರು. ಕಾರ್ಕಳ ಠಾಣೆಯ ಪಿ.ಎಸ್.ಐ. ಶ್ರೀ ಮಹೇಶ್ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರ್ಷಿಣಿ ಕೆ. ಇವರು ಸ್ವಾಗತಿಸಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

error: