May 16, 2024

Bhavana Tv

Its Your Channel

ದುರ್ಗ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್‌ಗೆ ಗುದ್ದಲಿ ಪೂಜೆ.

ಕಾರ್ಕಳ:- ಇಂದು ದುರ್ಗ ಗ್ರಾಮದ ತೆಳ್ಳಾರಿನ ಬೆದ್ರಪಲ್ಕೆ ಹೊಸಹಿತ್ಲು ಪರಿಸರದಲ್ಲಿ ಮಾನ್ಯ ಸಚಿವರಾದ ಶ್ರೀ. ವಿ. ಸುನಿಲ್ ಕುಮಾರ್ ರವರ ಮುತುವರ್ಜಿಯಿಂದಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವ ಸಲುವಾಗಿ 38 ಲಕ್ಷ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ಗೆ ಗುದ್ದಲಿ ಪೂಜೆಯು ನೆರವೇರಿತು.
ಉದ್ಯಮಿ ಹಾಗೂ ಧಾರ್ಮಿಕ ಕ್ಷೇತ್ರದ ಮುಖಂಡರೂ ಆದ ಮಹೇಶ್ ಶೆಟ್ಟಿ ಕುಡುಪುಲಾಜೆ ಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ತೆಳ್ಳಾರಿನ ಬೆದ್ರಪಲ್ಕೆ ಮತ್ತು ಕಡೆಪೈರಾಲು ಪರಿಸರದಲ್ಲಿ ಬಹಳ ಹಿಂದಿನಿAದಲೂ ಕುಡಿಯುವ ನೀರಿಗೆ ಸಮಸ್ಯೆ ಇತ್ತು. ಜಲಜೀವನ್ ಮಿಷನ್ ಯೋಜನೆಯಲ್ಲಿ ಈ ಎರಡೂ ಪ್ರದೇಶಗಳಿಗೆ ಹೊಂದಿಕೊAಡAತೆ ಬಹಳ ಎತ್ತರ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಕೊಳವೆ ಬಾವಿ ಹಾಗೂ ಅದಕ್ಕೆ ಹೊಂದಿಕೊAಡAತೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಇದು ಇಪ್ಪತ್ತೈದು ಸಾವಿರ ಲೀಟರ್ ಸಾಮರ್ಥ್ಯ ವನ್ನು ಹೊಂದಿದ್ದು ಎತ್ತರ ಪ್ರದೇಶದಲ್ಲಿರುವುದರಿಂದ ಸುಲಭವಾಗಿ ಪರಿಸರದ ಎಲ್ಲಾ ಭಾಗಗಳಿಗೆ ನೀರಿನ ಹರಿವು ಸಾಧ್ಯವಾಗಲಿದೆ ಎಂದು ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯಕ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಹೇಶ್ ಶೆಟ್ಟಿ ಕುಡುಪುಲಾಜೆ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಸುಶೀಲ, ಸದಸ್ಯರಾದ ದೇವಕಿ, ಸುಧಾಕರ ಪೂಜಾರಿ, ಸಂಧ್ಯಾ ಆಚಾರ್ಯ, ಮಾಜಿ ಅಧ್ಯಕ್ಷರಾದ ದಿನೇಶ್ ನಾಯಕ್, ಭಾಸ್ಕರ ಹೆಗ್ಡೆ ನಿಲೆಬೆಟ್ಟು, ಸತ್ಯನಾರಾಯಣ ಪಡ್ರೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. . ಪ್ರಸನ್ನ ಭಿಡೆಯವರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: