ಕಾರ್ಕಳ:-ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಶೌರ್ಯ ಸಂಚಲನ ಕಾರ್ಯಕ್ರಮವು ಅನಂತಶಯನದಿAದ ಸಂಘಟನೆಯ ಪ್ರಮುಖರಾದ ಭಾಸ್ಕರ್ ಕೋಟಿಯನ್ ಇವರಿಂದ ಪುಷ್ಪಾರ್ಚನೆ ಮೂಲಕ ಆರಂಭವಾಗಿ ಮುಖ್ಯ ರಸ್ತೆಯ ಮೂಲಕ ಸಾಗಿ ಮಂಜುನಾಥ ಪೈ ಸಭಾ ಭವನದಲ್ಲಿ ಸಂಪನ್ನ ಗೊಂಡಿತು.
ಮಂಜುನಾಥ್ ಸಭಾ ಭವನದಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮ ದಲ್ಲಿ ಬಜರಂಗದಳ ರಾಜ್ಯ ಸಂಚಾಲಕರು ಸುನಿಲ್ ಕೆ ಆರ್ ಪ್ರಮುಖವಾಗಿ ಮಾತನಾಡಿ ಈ ಶೌರ್ಯ ಸಂಚಲನ ಹಿಂದೂ ಸಮಾಜದಲ್ಲಿ ಆತ್ಮ ವಿಶ್ವಾಸ, ಜಾಗೃತಿ, ಸ್ವಾಭಿಮಾನವನ್ನು ತುಂಬಿಸುತ್ತದೇ, ಮತ್ತು ದೇಶ ವಿರೋಧಿಗಳಿಗೆ ಧರ್ಮ ವಿರೋಧಿ ಗಳಿಗೆ ದಿಟ್ಟ ಉತ್ತರ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ತಿನ ದೇವಿ ಪ್ರಸಾದ್ ಶೆಟ್ಟಿ ಮಾರ್ಗದರ್ಶನ ನೀಡಿದರು, ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ತಾರಾನಾಥ್, ಶಿವ ಶೆಟ್ಟಿ ಯವರು ಉಪಸ್ಥಿತರಿದ್ದರು, ವಿ ಹಿಂ ಪ ದ ಜಿಲ್ಲಾಧ್ಯಕ್ಷ ವಿಷ್ಣು ಮೂರ್ತಿ ಆಚಾರ್ಯ ಸಭಾಧ್ಯಕ್ಷೆತೆಯನ್ನು ವಹಿಸಿದ್ದರು ವೇದಿಕೆ ಯಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕರ ಸುರೇಂದ್ರ , ವಿ ಹಿಂ ಪ ದ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ್ ಪಾಲಡ್ಕ , ಕಾರ್ಕಳ ದ ಉಪಾಧ್ಯಕ್ಷರಾದ ಅಶೋಕ್ ಜೈನ್ ಜಗದೀಶ್ ಸಾಣೂರ್ ಉಪಸ್ಥಿತರಿದ್ದರು ಬಜರಂಗದಳದ ಪ್ರಖಂಡ ಸಂಚಾಲಕ ಚೇತನ್ ಪೆರಲ್ಕೆ ಸ್ವಾಗತಿಸಿ ಸುಧೀರ್ ನಿಟ್ಟೆ ಧನ್ಯವಾದ ನೀಡಿದರು ಶೈಲೇಶ್ ನಿರೂಪಿಸಿದರು
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,