ಕುಂದಾಪುರ ; ದಿನಾಂಕ 06/06/2023 ಮಂಗಳವಾರ ಸ್ಪೂರ್ತಿ ಯುವಕ ಮಂಡಲ ಹೊಸಬಾಳು ಇವರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂಬಾರಮಕ್ಕಿ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗ (ರಿ) ಕಟ್ ಬೆಲ್ತೂರು ಇವರು ನೀಡಿದ ಶೂ ಸ್ಟ್ಯಾಂಡ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಮ್ಸಿ ಅಧ್ಯಕ್ಷರಾದ ದಿನಕರ ಶೆಟ್ಟಿ ವಹಿಸಿದ್ದರು. ಹೊಸಬಾಳು ಸ್ಪೂರ್ತಿ ಯುವಕ ಮಂಡಲದ ಅಧ್ಯಕ್ಷರಾದ ವಿಜಯ ನಾಯ್ಕ್ ಇವರು ನೋಟ್ ಪುಸ್ತಕ ವಿತರಿಸಿದರು. ಚಂಡೆ ಬಳಗದ ಚಂದ್ರ ಕಟ್ ಬೆಲ್ತೂರು, ನರೇಶ್ ಭಟ್ ಹಾಗೂ ಪ್ರಥ್ವಿಕ್ ಶೂ ಸ್ಟ್ಯಾಂಡ್ ಹಸ್ತಾಂತರಿಸಿದರು.ಶಿಕ್ಷಣ ಇಲಾಖೆಯ BIERT ಪ್ರದೀಪ ಕುಮಾರ ಶೆಟ್ಟಿ, ತೆಕ್ಕಟ್ಟೆ CRP ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅರುಣ ಕುಮಾರ ಶೆಟ್ಟಿ ಕೊಕ್ಕೋಡ್, ಹಾಲಾಡಿ ಪ್ರಾಥಮಿಕ ಆರೋಗ್ಯ ಕೆಂದ್ರದ ಹರೀಶ್, ರಂಜಿತ್ ಕುಮಾರ್ ಶೆಟ್ಟಿ ಹೊಸಬಾಳು, SDMC ಉಪಾಧ್ಯಕ್ಷೆ ಇಂದಿರಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ದಯಾನಂದ ಶೆಟ್ಟಿ ಎಸ್ ಕಾರ್ಯಕ್ರಮ ನಿರ್ವಹಿಸಿದರು.ಸಹ ಶಿಕ್ಷಕಿ ವತ್ಸಲಾ ಸ್ವಾಗತಿಸಿದರು. ಗೌರವ ಶಿಕ್ಷಕಿ ಸುಶ್ಮಿತಾ ವಂದಿಸಿದರು.
More Stories
ಕಾರು ಅಪಘಾತ ಓರ್ವ ಮಹಿಳೆ ಮೃತ, ಇಬ್ಬರು ಗಂಭೀರ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ77ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ