ಕುಂದಾಪುರ ; ಸಾತ್ವಿಕ ಮತ್ತು ಮಾನ್ಯ ಎಂಬ ಎರಡು ಮಕ್ಕಳಿಗೆ ಅವರ ಆರೋಗ್ಯ ಸಮಸ್ಯೆ ಗಮನಿಸಿ ಅವರಿಗೆ ಧನ ಸಹಾಯವನ್ನು ದಿನಾಂಕ್ /17/06/2023 ಶನಿವಾರ ಸಂಜೆ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗ ಟ್ರಸ್ಟ್. ( ರಿ ) ಕಟ್ ಬೆಲ್ತೂರು ಹಾಗೂ ನಾವುಂದ ಎಲ್ಲ ಸದಸ್ಯರ ಉಪಸ್ಥಿತಿಯಲ್ಲಿ ಊರಿನ ಸಾತ್ವಿಕ್ ಹಾಗೂ ಮಾನ್ಯ ಎರಡು ಪುಟ್ಟ ಕಂದಮ್ಮಗಳ ಚಿಕಿತ್ಸೆ ಸಹಾಯಾರ್ಥಕವಾಗಿ ಈ ವರ್ಷದ ಚಂಡೆ ಕಾರ್ಯಕ್ರಮ ತಿರುಗಾಟದಲ್ಲಿ ಕಲೆಕ್ಷನ್ ಮಾಡಿದ ಹಣವನ್ನು ಶ್ರೀ ಭದ್ರ ಮಹಾಕಾಳಿ ಬಳಗದ ಚಂಡೆ ತರಬೇತಿ ನಡೆಯುವ ಕಬ್ಬೈಲ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಸಾತ್ವಿಕ ಹಾಗೂ ಮಾನ್ಯ ಇವರಿಗೆ ನೀಡಿದರು. ಇದು ಶ್ರೀಭದ್ರ ಮಹಾಕಾಳಿ ಚಂಡೆ ಬಳಗದ ಆರು ಮತ್ತು ಏಳನೇ ಹೆಜ್ಜೆಯಾಗಿರುತ್ತದೆ…
ತಮ್ಮ ಜೊತೆ ಸಹಕರಿಸಿದ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗದ ಎಲ್ಲ ಸರ್ವ ಸದಸ್ಯರಿಗೂ ಹಾಗೆ ನಮಗೆ ಸಹಾಯ ಹಸ್ತ ನೀಡಿದ ಎಲ್ಲ ಜನರಿಗೂ ಶ್ರೀ ಭದ್ರ ಮಹಾಕಾಳಿ ಚಂಡೆ ಬಳಗದಿಂದ ಹೃದಯಪೂರ್ವಕವಾಗಿ ವಂದನೆಗಳು ಹಾಗೂ ಸಹಕಾರ ಹಾಗೂ ಆಶೀರ್ವಾದ ಮುಂದು ಕೂಡ ನಮ್ಮ ತಂಡದ ಮೇಲೆ ಇರಲಿ ಎಂದು ಚಂಡೆ ಬಳಗದ ಮುಖ್ಯಸ್ಥರಾದ ಚಂದ್ರ ಮೊಗವೀರ ವಿನಂತಿಸಿದ್ದಾರೆ.
More Stories
ಕಾರು ಅಪಘಾತ ಓರ್ವ ಮಹಿಳೆ ಮೃತ, ಇಬ್ಬರು ಗಂಭೀರ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಗೆ, ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಭೇಟಿ
ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ77ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ