April 27, 2024

Bhavana Tv

Its Your Channel

ಬೈಕ ಅಪಘಾತ ಸವಾರ ಶಿಕ್ಷಕ ಸ್ಥಳದಲ್ಲೆ ಮೃತ

ಭಟ್ಕಳ: ತಾಲ್ಲೂಕಿನ ನೂಜ ಗ್ರಾಮದ ಹೆರಬುಡಕಿ ಬಳಿ ಶನಿವಾರ ರಾತ್ರಿ ಬೈಕೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಗಾಯಗೊಂಡ ಬೈಕ ಸವಾರ ಶಿಕ್ಷಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಶಾರದಹೊಳೆ ಬೆಂಗ್ರೆ ನಿವಾಸಿ ರವೀಂದ್ರ ವೆಂಕಟೇಶ ವೈದ್ಯ(೫೯) ಮೃತ ಶಿಕ್ಷಕ. ಶನಿವಾರ ಸುರಿಯುತ್ತಿದ್ದ ಮಳೆಯಲ್ಲಿ ಬೈಕ ಚಲಾಯಿಸಿಕೊಂಡು ಹೋಗುವಾಗ ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗೆ ಡಿಕ್ಕಿ ಹೊಡೆದು ಬೈಕ ನಿಯಂತ್ರಣ ತಪ್ಪಿದೆ. ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: