ಭಟ್ಕಳ: ಕಾಡು, ಹೊಳೆ, ಹಳ್ಳದ ಬದಿಗೆ ಓಡಾಡಿಕೊಂಡಿದ್ದ 3 ಅಡಿಗೂ ಅಧಿಕ ಉದ್ದದ ಉಡವೊಂದು ಇಲ್ಲಿನ ಸಂತೆಯ ಮಾರುಕಟ್ಟೆ ಹೋಗುವ ರಸ್ತೆಯ ಪಕ್ಕದಲ್ಲಿ ಇದ್ದ ಚರಡಿ ಯಲ್ಲಿ ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಉಡವನ್ನು ಹಿಡಿದು ಹಾಡುವಳ್ಳಿ ಕಾಡು ಪ್ರದೇಶಕ್ಕೆ ಬಿಟ್ಟು ಬಂದ ಘಟನೆ ನಡೆದಿದೆ.
ಕಳೆದ ಒಂದು ವಾರ ಭಟ್ಕಳದಲ್ಲಿ ವಿಪರೀತ ಮಳೆ ಇದ್ದ ಕಾರಣ ಉಡವು ಮಳೆಯ ನೀರಿನೊಂದಿಗೆ ಭಟ್ಕಳ ಪಟ್ಟಣದ ಚರಂಡಿಯನ್ನು ಸೇರಿಕೊಂಡಿರಬಹುದು ಎಂದು ತರ್ಕಿಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಪ್ರಮೋದ ಮೊದಲಾದವರು ಪಾಲ್ಗೊಂಡಿದ್ದರು
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ