May 16, 2024

Bhavana Tv

Its Your Channel

ಮಡಿವಾಳ ಸಮಾಜದವರಿಂದ ಶಾಸಕರಾದ ಶ್ರೀಯುತ ದಿನಕರ ಶೆಟ್ಟಿ ಯವರಿಗೆ ಅಭಿನಂದನೆ

ಹೊನ್ನಾವರ ; ತಾಲೂಕ ಮಡಿವಾಳರ ಸಂಘದಿAದ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮೀತಿಯ ಅಧ್ಯಕ್ಷರಾಗಿ ನೇಮಕವಾಗಿರುವ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಯುತ ದಿನಕರ ಶೆಟ್ಟಿ ಯವರನ್ನು ಬೆಟ್ಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ಅದೇ ಸಮಯದಲ್ಲಿ ಸಂಘದಿAದ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ಕಟ್ಟಡದ ಕಾಮಗಾರಿಯ ಪ್ರಗತಿಯ ಕುರಿತು ಮಾಹಿತಿ ನೀಡಿ ಮುಂದುವರಿದ ಕಾಮಗಾರಿಗಾಗಿ ಸರಕಾರದಿಂದ ಹೆಚ್ಚಿನ ಅನುದಾನಕ್ಕಾಗಿ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ತಮ್ಮ ಸ್ವಂತ ದೇಣಿಗೆಯಾಗಿ ರೂ.೪೮೦೦೦-೦೦ ಕಟ್ಟಡ ಕಾಮಗಾರಿಗೆ ನೀಡಿದ್ದು ಕ್ಷೇತ್ರ ಅಭಿವೃದ್ಧಿಯ ಅನುದಾನದಲ್ಲಿ ಇನ್ನೂ ಹೆಚ್ಚಿನ ನೆರವನ್ನು ನೀಡುವದಾಗಿ ಭರವಸೆ ನೀಡಿದರು.
ಹೊನ್ನಾವರ ಪಟ್ಟಣದ ಮಡಿವಾಳ ಕೇರಿಯಲ್ಲಿ ಸಂಘದಿAದ ಸಮುದಾಯದ ಹಿತದ್ರಷ್ಟಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ಕಟ್ಟಡದ ಅಂದಾಜು ಪಟ್ಟಿ ೧.೩೦ ಕೋಟಿ ಆಗುತ್ತಿದ್ದು ಈಗಾಗಲೇ ಸರಕಾರದ ಅನುದಾನ,ಸಮಾಜ ಭಾಂಧವರ ಸಹಕಾರದಿಂದ ಸುಮಾರು ಶೇಕಡಾ ೬೦ ಕಾಮಗಾರಿ ಕೆಲಸ ಆಗಿದ್ದು ಇನ್ನೂ ಸುಮಾರು ೫೦ ಲಕ್ಷದ ಕೆಲಸ ಆಗಬೇಕಾಗಿದೆ. ಆದ್ದರಿಂದ ಸಮಾಜದ ಹಿತೈಷಿಗಳು, ದಾನಿಗಳು ,ಸಮಾಜ ಭಾಂದವರು ಈ ಒಂದು ಉತ್ತಮ ಕಾರ್ಯಕ್ಕೆ ಸಹಕರಿಸುವಂತೆ ಸಂಘದ ಅಧ್ಯಕ್ಷರಾದ ನಾಗೇಶ ಮಡಿವಾಳ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ನಾಗೇಶ್ ಮಡಿವಾಳ, ಡಿ .ಡಿ. ಮಡಿವಾಳ,ಉಮೇಶ ಮಡಿವಾಳ, ಅನಿಲ ಮಾಡಿವಾಳ, ವಿನಾಯಕ ಮಡಿವಾಳ,ಶಿವಾನಂದ ಹೊನ್ನಾವರ ಮತ್ತು ನವೀನ ಮಡಿವಾಳ ಇದ್ದರು.

error: