ಭಟ್ಕಳ ; ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕೃಷಿಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಅಣ್ಣಪ್ಪ ಚನ್ನಾ ನಾಯ್ಕ(೩೫) ಎಂದು ತಿಳಿದು ಬಂದಿದೆ. ಈತನ ತಂದೆ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು ತಮ್ಮನ ಹೃದಯ ಸಂಬAದಿ ಕಾಯಿಲೆಗೆ ಕೆ ಎಮ್ ಸಿ ಆಸ್ಪತ್ರೆ ಮಣಿಪಾಲದಿಂದ ಶಸ್ತ್ರಚಿಕಿತ್ಸೆಯಾಗಿದ್ದು ಈ ಬಗ್ಗೆ ಹಾಗೂ ಕೃರ್ಷಿ ಚಟುವಟಿಕೆಗಾಗಿ ಬ್ಯಾಂಕ ಸೂಸೈಟ ಹಾಗೂ ಇತರೇ ಕಡೆ ಸಾಲ ಮಾಡಿಕೊಂಡಿದ್ದು ಈ ವಿಚಾರವಾಗಿ ಸಾಲ ಮರಳಿ ತೀರಿಸಲಾಗದೆ ಮನನೊಂದು ಸರ್ಪನಕಟ್ಟಾ ದಲ್ಲಿರುವ ತನ್ನ ಶೂಂ ರೂಂನಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮತೃನ ತಮ್ಮನಾದ ಮಾದೇವ ಚನ್ನಾ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದಾರೆ
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ