ಭಟ್ಕಳ ; ತಾಲ್ಲೂಕಿನ ಜಾಲಿ ಪಟ್ಟಣಪಂಚಾಯತ್ ವ್ಯಾಪ್ತಿಯ ಕಾರಗದ್ದೆ ಹುರುಳಿಸಾಲ್ ಎಂಬಲ್ಲಿ ವ್ಯಕ್ತಿಯೊಬ್ಬರು
ಕುಟುಂಬಸ್ಥರೊoದಿಗೆ ಮನಸ್ತಾಪ ಮಾಡಿಕೊಂಡು ಬೋಟ್ ಕೆಲಸಕ್ಕೆ ಹೋಗುವುದಾಗಿ ರಾತ್ರಿ ಮನೆಯಿಂದ ಹೋದ ವ್ಯಕ್ತಿ ಮನೆಯ ಪಕ್ಕದ ಬಾವಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಇಸ್ಮಾಯಿಲ್ ಕೆ.ಎಂ (೫೬) ಎಂದು ತಿಳಿದು ಬಂದಿದೆ. ಈತ ಕೆಲವು ವರ್ಷಗಳಿಂದ ಕುಡಿತದ ದಾಸನಾಗಿದ್ದ. ಕೆಲವು ವರ್ಷಗಳಿಂದ ಗೋವಾ ರತ್ನಗಿರಿಯಲ್ಲಿ ಬೋಟ್ ಕೆಲಸ ಮಾಡಿಕೊಂಡಿದ್ದ ಈತ ಕಳೆದ ೧೫ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಾನೆ. ನಿನ್ನೆ ರಾತ್ರಿ ಕುಡಿದು ಕುಟುಂಬಸ್ಥರೊoದಿಗೆ ಮನಸ್ಥಾಪ ಮಾಡಿಕೊಂದ್ದಾನೆ. ನಂತರ ಬ್ಯಾಗ್ ತೆಗೆದುಕೊಂಡು ರತ್ನಗಿರಿಗೆ ಬೋಟ್ ಕೆಲಸಕ್ಕೆ ಹೋಗುದಾಗಿ ಹೋದವನು ಮುಂಜಾನೆ ಮನೆಯ ಪಕ್ಕದ ಬಾವಿಯಲ್ಲಿ ಬ್ಯಾಗ್ ಹಾಕಿಕೊಂಡ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ