May 18, 2024

Bhavana Tv

Its Your Channel

ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಭೇಟಿ

ಗೋಕರ್ಣ: ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಇಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಮಾನ್ಯ ಶ್ರೀ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಬಂದು ಶ್ರೀ ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು. ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ
ಶ್ರೀ ಜಿ ಕೆ ಹೆಗಡೆಯವರು ಮಾನ್ಯ ಸಚಿವರಿಗೆ ಗೌರವ ಸಮರ್ಪಿಸಿದರು.ಮಾನ್ಯ ಸಚಿವರು ಶ್ರೀ ದೇವಾಲಯದ ಸ್ವಚ್ಛತೆ, ಶಿಸ್ತು ಬದ್ಧತೆ ಮತ್ತು ಪೂಜಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಲಿಂಗ ವಿಶ್ವರೂಪ ದರ್ಶನದ ಆಸಕ್ತಿ ವ್ಯಕ್ತಪಡಿಸಿದರು.

error: