April 26, 2024

Bhavana Tv

Its Your Channel

ಹಳಿಯಾಳದ ಹಿಂದು ಹೋರಾಟಗಾರ ಅಖೀಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜು ದೂಳಿ ನಿಧನ

ಹಳಿಯಾಳ ; ಹಳಿಯಾಳದ ಹಿಂದೂ ಹೋರಾಡಗಾರ ರಾಜು ದೂಳಿ ಕೋರೋನಾ ಪಾಸಿಟಿವ್ ನಿಂದಾಗಿ ನಿಧನ ಶನಿವಾರ ನಿಧನರಾಗಿದ್ದಾರೆ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಉಸಿರಾಟ ತೊಂದರೆಯಿOದ ನಿಧನ ಹೊಂದಿದ್ದು ಕಳೆದ ದಿನಗಳ ಹಿಂದಷ್ಟೆ ಕೋರೊನಾ ಪಾಸಿಟಿವ್ ಧೃಡಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವಾರದ ಹಿಂದಷ್ಟೆ ತಾಯಿಯನ್ನು ಕಳೆದುಕೊಂಡಿದ್ದ ರಾಜು ದೂಳಿ ತಾಯಿಯ ಅಂತ್ಯಕ್ರೀಯೆ ವೇಳೆ ಆಸ್ಪತ್ರೆಯಿಂದ ಆಕ್ಸಿಜನ್ ಹಾಕಿಕೊಂಡು ಬಂದಿದ್ದರು ಎನ್ನಲಾಗಿದೆ, ಮತ್ತೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದರಿAದ ತಾಯಿಯ ಅಂತ್ಯಕ್ರಿಯೆ ಬಳಿಕ ವಾಪಸ್ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿoದ ಶನಿವಾರ ಮಧ್ಯಾನ ಆಸ್ಪತ್ರೆಯಲ್ಲಿ ರಾಜು ದೂಳಿ ಸಾವನ್ನಪ್ಪಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ರಾಜು ದೂಳಿಯವರ ನಿಧನಕ್ಕೆ ಅಭಿಮಾನಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.

error: