April 27, 2024

Bhavana Tv

Its Your Channel

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭಟ್ಕಳಕ್ಕೆ , ಶಾಸಕ ಸುನೀಲ ನಾಯ್ಕರಿಂದ ಅತಿಥಿ ಸತ್ಕಾರ

ಭಟ್ಕಳ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಶಾಸಕ ಸುನೀಲ ನಾಯ್ಕ ಅವರ ಜಾಲಿಯಲ್ಲಿನ ಮನೆಗೆ ಭೇಟಿ ನೀಡಿ, ಮಧ್ಯಾಹ್ನದ ಭೋಜನ ಸೇವಿಸಿ ತೆರಳಿದ್ದಾರೆ.

ಹುಬ್ಬಳ್ಳಿಯಲ್ಲಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅಲ್ಲಿಂದ ಉಡುಪಿಗೆ ತೆರಳುವ ಮಾರ್ಗಮಧ್ಯೆ ಕುಮಟಾದ ಪ್ರವಾಸಿಮಂದಿರದಲ್ಲಿ ವಿಶ್ರಾಂತಿ ಪಡೆದು,ಬಳಿಕ ಭಟ್ಕಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ನಾಯ್ಕ ತಮ್ಮ ಕುಟುಂಬಸ್ಥರನ್ನು ಸಚಿವರಿಗೆ ಪರಿಚಯಿಸಿದರು.ಮಲ್ಲಿಗೆ ಹಾರ ಹಾಕಿ ಸ್ವಾಗತಿಸಿದರು. ಭೇಟಿ ವೇಳೆ ಸಚಿವರಿಗೆ ರಕ್ತದೊತ್ತಡ ಹಾಗೂ ಕೋವಿಡ್ ತಪಾಸಣೆ ಪರಿಶೀಲನೆ ಮಾಡಿದರು.ಆರೋಗ್ಯವಾಗಿರುವ ಬಗ್ಗೆ ವೈದ್ಯರು ತಿಳಿಸಿದರು. ನಂತರ ಶಾಸಕ ಸುನೀಲ್ ನಾಯ್ಕ ಹಾಗೂ ಕೆಲ ಬಿಜೆಪಿ ಮುಖಂಡರು, ತಾಲೂಕಾಡಳಿತದ ಅಧಿಕಾರಿಗಳು, ಪೋಲಿಸರೊಂದಿಗೆ ಸೇರಿ ಭೋಜನ ಸವಿದರು.

ನಂತರ ಕೋವಿಡ್ ಮುನ್ನೆಚ್ಚರಿಕೆ ಸಂದರ್ಭದಲ್ಲಿ ಎದುರಾಗಲಿರುವ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧರಿರುವಂತೆ ಉಪಸ್ಥಿತರಿದ್ದ ಸಹಾಯಕ ಆಯುಕ್ತೆ ಮಮತಾ ದೇವಿ ಅವರಿಗೆ ಸೂಚನೆ ನೀಡಿದರು.ಇದೇ ವೇಳೆ ಶಾಸಕರ ಆತಿಥ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ನಂತರ ಉಡುಪಿಗೆ ತೆರಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

error: