April 29, 2024

Bhavana Tv

Its Your Channel

ಭಟ್ಕಳದಲ್ಲಿ ನವೀಕೃತಗೊಂಡ ಆಹ್ಮದ್ ಸಯೀದ್ ಜುಮಾ ಮಸೀದಿ ಲೋಕಾರ್ಪಣೆ.

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುರುಳಿಸಾಲ್ ನಲ್ಲಿರುವ ನವೀಕೃತಗೊಂಡಿರುವ ಆಹ್ಮದ್ ಸಯೀದ್ ಜುಮಾ ಮಸೀದಿಯನ್ನು ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮೊಹಿಯುದ್ದೀನ್ ಅಕ್ರಮಿ ಮದನಿ, ನದ್ವಿ ಶನಿವಾರ ಅಸರ್ ನಮಾಝ್ ಬಳಿಕ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರುಇನ್ನೂ ಕೆಲವೇ ದಿನಗಳಲ್ಲಿ ಪವಿತ್ರ ತಿಂಗಳು ರಮಝಾನ್ ಆಗತವಾಗುತ್ತಿದೆ. ರಮಝಾನ್ ತಿಂಗಳು ಅತ್ಯಂತ ಪುಣ್ಯದಾಯಕ ಮತ್ತು ದಾನಧರ್ಮದ ತಿಂಗಳಾಗಿದ್ದು ಆರೋಗ್ಯವಂತ ಪ್ರತಿಯೊಬ್ಬ ಮುಸ್ಲಿಮ್ ಸ್ತಿçà ಪುರುಷರಿಗೆ ಉಪವಾಸ ವೃತ ಆಚರಿಸುವುದು ಕಡ್ಡಾಯಗೊಳಿದೆ ಎಂದರು.
ಆಹ್ಮದ್ ಸಯೀದ್ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ಜಮಾಅತೆಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಝುಬೇರ್ ಎಸ್.ಎಂ. ಪ್ರಸ್ತಾವಿಕವಾಗಿ ಮಾತನಾಡಿ, ಈ ಮಸೀದಿಯಲ್ಲಿ ಪ್ರಾರ್ಥನೆಗೆ ಬರುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದನ್ನು ವಿಸ್ತರಿಸಿ ಅತ್ಯಂತ ಸುಂದರವಾಗಿ ನವೀಕೃತಗೊಳಿಸಲಾಗಿದೆ. ಈ ಮಸೀದಿ ನವೀಕರಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಮೌಲಾನ ಇಕ್ಬಾಲ್ ಆಹಮದ್ ನಾಯ್ತೆ, ಸೈಯ್ಯದ್ ಶಕೀಲ್‌ಎಸ್.ಎಂ, ಕಾದಿರ್ ಮೀರಾ ಪಟೇಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: