May 3, 2024

Bhavana Tv

Its Your Channel

ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರವೇ ಹೊನ್ನಾವರ ತಾಲೂಕಾ ಘಟಕದಿಂದ ಪ್ರತಿಭಟನೆ

ಹೊನ್ನಾವರ: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು,ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರವೇ ಹೊನ್ನಾವರ ತಾಲೂಕಾ ಘಟಕದಿಂದ ಸೋಮವಾರ ಪ್ರತಿಭಟಿಸಿದರು.

ಪಟ್ಟಣದ ಶರಾವತಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಹೂವಿನ ಹಾರ ಸಮರ್ಪಿಸಿ ಗೌರವ ಸಲ್ಲಿಸಿದರು. ಈ ವೇಳೆ ಎಂಇಎಸ್ ಪುಂಡಾಟಿಕೆ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ಸರ್ಕಾರಕ್ಕೆ ಒತ್ತಾಯಿಸಿದರು. ಕರವೇ ತಾಲೂಕಾಧ್ಯಕ್ಷ ಮಂಜು ನಾಥ ಗೌಡ ಮಾತನಾಡಿ ಕನ್ನಡ ನಮ್ಮ ತಾಯಿ, ಬಾವುಟ ತಾಯಿ ಸೀರೆ ಇದ್ದಂತೆ ಎಮ್ ಇ ಎಸ್ ಪುಂಡರು ಅದನ್ನೆ ಸುಟ್ಟಿದ್ದಾರೆ, ಸ್ವಾತಂತ್ರ‍್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ಪುಂಡಾಟಿಕೆ ಮೆರೆದಿದ್ದಾರೆ. ಅಂತಹ ಸಂಘಟನೆ ರಾಜ್ಯದಿಂದ ಹೊರ ದಬ್ಬಬೇಕು ಎಂದರು.

ಎಂಇಎಸ್ ಮತ್ತು ಶಿವಸೇನೆ ಕೃತ್ಯವನ್ನು ರಾಜಕೀಯ ಪಕ್ಷದ ಕಾರ್ಯಕರ್ತರು, ರಾಜಕಾರಣಿಗಳು ಖಂಡಿಸಿ, ಧ್ವನಿಯೆತ್ತಬೇಕು. ವೋಟಿನ ಆಸೆಗೆ ಬೂಟು ನೆಕ್ಕುವ ಕೆಲಸವನ್ನು ಯಾವೊಬ್ಬ ರಾಜಕಾರಿಣಿಗಳೂ ಮಾಡಬಾರದೆಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ನಾಗೇಶ ಗೌಡ,ಜಯಂತ ಗೌಡ, ನಿಖಿಲ್ ನಾಯ್ಕ,ಶಿವಪ್ರಸಾದ ಗೌಡ, ರವಿಚಂದ್ರ ನಾಯ್ಕ, ಸಾಯಿಷ್ ಭಂಡಾರಿ, ಕಿರಣ ಗೌಡ, ಲೋಕೇಶ ಗೌಡ, ನಾಗರಾಜ ನಾಯ್ಕ, ತರುಣ ನಾಯ್ಕ, ಶ್ರೀಧರ ನಾಯ್ಕ, ಇತರರು ಪಾಲ್ಗೊಂಡಿದ್ದರು.

error: