May 3, 2024

Bhavana Tv

Its Your Channel

ಸಂಕಷ್ಟಿಯೆOದು ಇಡಗುಂಜಿಯಲ್ಲಿ ಭಕ್ತರಿಂದ ಗಣಪನ ದರ್ಶನ.

ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಬುಧವಾರ ಸಂಕಷ್ಟಿಯAದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಿದ್ದಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಇಡಗುಂಜಿಯಲ್ಲಿ ಗಣೇಶ ಚತುರ್ಥಿ,ರಥಸಪ್ತಮಿ ಹಾಗೂ ಮಂಗಳವಾರ ಅಂಗಾರಕಿ ಸಂಕಷ್ಟಿಯೆoದು ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ.

ಸುಪ್ರೀಂ ಕೋರ್ಟ್ ರಿಸೀವರ, ಜಿಲ್ಲಾ ನ್ಯಾಯಧೀಶರ ಮಾರ್ಗದರ್ಶನದಂತೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಿಗ್ಗೆ ೫-೦೦ ಗಂಟೆಯಿAದಲೇ ಭಕ್ತರಿಗೆ ದೇವರ ದರ್ಶನ ಕಲ್ಪಿಸಿಕೊಡಲಾಗಿತ್ತು. ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಒಂದು ನೂರಕ್ಕೂ ಹೆಚ್ಚು ಗಣಹೋಮ, ಸತ್ಯಗಣಪತಿ ವೃತಕಥೆಗಳು ನಡೆದವು.
ಭಕ್ತರು ಅತ್ಯಂತ ಭಕ್ತಿ ಶೃದ್ದೆಯಿಂದ ಸಂಜೆಯವರೆಗೆ ದರ್ಶನ ಮಾಡಿದರು. ಮಹಾಪೂಜೆ, ಅಭಿಷೇಕ, ಪಂಚಕಜ್ಜಾಯ ಸೇವೆಗಳು ನಡೆದವು.

ವರದಿ ವೆಂಕಟೇಶ ಮೇಸ್ತ ಹೊನ್ನಾವರ

error: