May 10, 2024

Bhavana Tv

Its Your Channel

ಹೊನ್ನಾವರ ಪಿ.ಎಲ್.ಡಿ ಬ್ಯಾಂಕ್ ನಿರ್ದೆಶಕರಾಗಿ ವಿ.ಕೆ. ವಿಶಾಲ್ ಅವಿರೋಧ ಆಯ್ಕೆ.

ಹೊನ್ನಾವರ ಪಿಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿ ವಿ.ಕೆ.ವಿಶಾಲ್ (ವಿಶಾಲ ಕೃಷ್ಣ ಭಟ್) ವಂದೂರು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಟಿ.ಎಸ್.ಹೆಗಡೆ ನಿಧನದ ಹಿನ್ನಲೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಿರಿಯ ವಯಸ್ಸಿನಲ್ಲಿಯೇ ನಿರ್ದೇಶಕ ಸ್ಥಾನವನ್ನು ಅಲಂಕರಿಸಿದ್ದಾರೆ. ಎರಡು ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ 8 ಮತಗಳ ಅಲ್ಪ ಅಂತರಿAದ ಪರಾಜಿತಗೊಂಡಿದ್ದರು. ಟಿ.ಎಸ್.ಹೆಗಡೆ ಆಕಸ್ಮಿಕ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರ ಹೊರತಾಗಿ 8 ಮಂದಿ ಕಣದಲ್ಲಿದ್ದರು. ಕಣದಲ್ಲಿದ್ದ ಎಲ್ಲರೂ ತಮ್ಮ ಉಮೇದುವಾರಿಕೆ ವಾಪಸ್ಸ ಪಡೆದಿರುದರಿಂದ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಹಿಂದೆ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ದಿ. ಕೆ.ವಿ. ಭಟ್ಟ ವಂದೂರ ಇವರ ಮಗನಾದ ವಿಶಾಲ್ ಸಿ.ಎ. ಇಂಟರಮಿಡಿಯಟ್ ವ್ಯಾಸಂಗ ಮಾಡಿದ್ದು, ಕೃಷಿಯ ಕೆಲಸವನ್ನು ಮಾಡಿಕೊಂಡಿದ್ದು, ಜೊತೆಗೆ ಸಹಕಾರಿ ರಂಗದತ್ತ ಹೆಜ್ಜೆಇಟ್ಟು ಪ್ರಥಮ ಭಾರಿಗೆ ತಾಲೂಕಾ ಸಹಕಾರಿ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಗಿದ್ದಾರೆ.

ನನಗೆ ದೊರೆತ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದೇನೆ. ನಾನು ಈ ಸ್ಥಾನಕ್ಕೆ ಆಯ್ಕೆಯಾಗಲು ಮಾಜಿ ಶಾಸಕರಾದ ಮಂಕಾಳ ವೈದ್ಯ, ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೆಶಕರು, ಶೇರುದಾರರು ಮತ್ತು ಉಮೇದುವಾರಿಕೆ ಸಲ್ಲಿಸಿದ ಬಳಿಕ ತಮ್ಮ ನಾಮಪತ್ರ ವಾಪಸ್ಸು ಪಡೆದು ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನನ್ನ ಹಿರಿಯ ಷೇರುದಾರರಿಗೂ, ಸಹಾಯ ಮಾಡಿದ ಎಲ್ಲ ಗಣ್ಯರಿಗೂ ಧನ್ಯವಾದಗಳು ಇವರೆಲ್ಲರ ಸಹಾಯ ಸಹಕಾರದಿಂದ ನಾನು ಆಯ್ಕೆಯಾಗಿದ್ದು ಸಂತಸ ಉಂಟುಮಾಡಿದೆ ಎಂದರು. ಆಯ್ಕೆಯಾದ ಬಳಿಕ ಬ್ಯಾಂಕ್ ನಿರ್ದೆಶಕರು, ಹಾಗೂ ಅಭಿಮಾನಿಗಳು ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.

error: