ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರು ವಂದನೆ ಹಾಗೂ ವರ್ಗಾವಣೆಗೊಂಡ ಉಪನ್ಯಾಸಕ ಶ್ರೀ ಜಿ.ಎಮ್. ನಾಯಕ ರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಆರಂಭದಲ್ಲಿ ವಿದ್ಯಾರ್ಥಿಗಳು ಎಲ್ಲಾ ಉಪನ್ಯಾಸಕರಿಗೆ ಪುಷ್ಪ ನೀಡಿ , ಗುರುಗಳ ವಿಶೇಷತೆ ಬಣ್ಣಿಸಿ ಗುರುಗಳಿಗೆ ಗೌರವ ಸಲ್ಲಿಸಿದರು. ಅನಂತರ ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಎಮ್. ನಾಯಕರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಿ.ಎಮ್. ನಾಯಕರು ನಾಲ್ಕು ವರ್ಷ ಈ ಕಾಲೇಜಿನಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತ, ಒಂದು ಕುಟುಂಬದAತೇ ಇದ್ದ ಉಪನ್ಯಾಸಕ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ಉಪನ್ಯಾಸಕರೆಲ್ಲರೂ ಸಹೋದ್ಯೋಗಿ ಜಿ.ಎಮ್. ನಾಯಕರ ಉತ್ತಮ ಪಾಠ ವೈಖರಿ, ಭಾಷಣದ ಸೊಗಸು, ಗುಣ ವಿಶೇಷಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅತಿಥಿಗಳಾದ ಮೂಡ್ಕಣಿ ಗಜಾನನ ಹೆಗಡೆಯವರು " ಪ್ರತಿನಿತ್ಯ ಓದುತ್ತ ಬೆಳೆಯುವ ಉಪನ್ಯಾಸಕ ಸದಾ ಕ್ರಿಯಾಶೀಲ ನಾಗಿರುತ್ತಾನೆ ಎಂಬುದಕ್ಕೆ ಜಿ.ಎಮ್. ನಾಯಕರು ನಿದರ್ಶನ ವಾಗಿದ್ದಾರೆ " ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಎಸ್ . ಹೆಗಡೆ , ಜಿ.ಎಮ್.ನಾಯಕರು ತರಗತಿಯಲ್ಲಿ ಹೇಗಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಹೇಳಿದರೆ, ಸಹೋದ್ಯೋಗಿಗಳ ಜೊತೆ ಹಾಗೂ ಸಮಾಜದಲ್ಲಿ ಹೇಗಿದ್ದಾರೆ ಎಂಬುದನ್ನು ಉಪನ್ಯಾಸಕರು ಚಿತ್ರಿಸಿದ್ದಾರೆ. ಒಟ್ಟಾರೆ ಅವರ ವ್ಯಕ್ತಿತ್ವವು ಇಂದಿಲ್ಲಿ ಶಾಬ್ದಿಕ ಪ್ರತಿಮೆಯೇ ಆಗಿ ನಿರ್ಮಾಣಗೊಂಡಿದೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರ್ಗವ ಭಟ್ ಸ್ವಾಗತಿಸಿದರು. ಪದ್ಮಾವತಿ ನಾಯ್ಕ ವಂದಿಸಿದರು. ಮಹೇಶ ಹೆಗಡೆ ಕಾರ್ಯಕ್ರಮ ವನ್ನು ನಿರೂಪಿಸಿದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್