April 29, 2024

Bhavana Tv

Its Your Channel

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಸಾವು

ಕಾರವಾರ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಸಂಚಾರಿ ಠಾಣೆ ಎಎಸ್‌ಐ ಅಬ್ದುಲ್ ಖಾದರ್ ಶೇಖ್(58) ಮೃತರು. ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರೇ ಕಮಾಂಡ್ ನೀಡಿದ್ದರು.ಇದಾದ ಕೆಲವೇ ಕ್ಷಣದಲ್ಲಿ ಬಿದ್ದರು.ಕೂಡಲೇ ಅವರನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಮೃತರಿಗೆ ಹೆಂಡತಿ,ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೃತರಿಗೆ ಕಾರವಾರ ಪೋಲಿಸ್ ಅಧೀಕ್ಷಕರು ಶಿ ಸುಮನಾ ಡಿ ಪೆನ್ನೆಕರ್ ಐಪಿಎಸ್ ಸಂತಾಪ ಸೂಚಿಸಿದ್ದಾರೆ.

error: