May 14, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ಸಂಘದವತಿಯಿOದ ತುಳಸಿ ಗೌಡ ಹಾಗೂ ಸುಕ್ರಿ ಬೊಮ್ಮ ಗೌಡರವರಿಗೆ ಸನ್ಮಾನ

ಕುಮಟಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುಮಟಾ ಸಂಘದವತಿಯಿAದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆ ತುಳಸಿ ಗೌಡ ಹಾಗೂ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ ಇವರನ್ನು ಶನಿವಾರ ಅವರ ಮನೆಗೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಡಿ ನಾಯ್ಕ ಮಾತನಾಡಿ ಹಿಂದುಳಿದ ವರ್ಗದ ಇಬ್ಬರು ಮಹಾನ್ ಸಾಧಕರಿಗೆ ಪ್ರಶಸ್ತಿ ಬಂದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅವರ ಅನುಪಮ ಸೇವೆ ಗಮನಾರ್ಹವಾದುದು. ಅವರ ಕಷ್ಟದ ಬದುಕಿಗೆ ಸಂಘ, ಸಂಸ್ಥೆಗಳು ಉದಾರತೆ ತೋರಿ ಅವರಿಗೆ ಸಹಾಯಹಸ್ತ ಚಾಚುವುದು ಸೂಕ್ತ. ಈ ದಿಸೆಯಲ್ಲಿ ಸರ್ಕಾರಿ ನೌಕರರ ಸಂಘ ಸದಾ ಅವರ ಬೆಂಗಾವಲಾಗಿ ಇರಲಿದೆ ಎಂದರು. ಸಂಘದ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಕಾರ್ಯದರ್ಶಿ ಎನ್ ಆರ್ ನಾಯ್ಕ ಇನ್ನಿತರರು ಇದ್ದರು.

error: