ಕುಮಟಾ ತಾಲೂಕಿನ ಕಲ್ಲಬ್ಬೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಬಾರ್ಡನ ೨೨ ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ ಎರಡು ತರಗತಿ ಕೊಠಡಿಗಳನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು
ಬಳಿಕ ಮಾತನಾಡಿದ ಅವರು , ಗ್ರಾಮೀಣ ಭಾಗದಲ್ಲಿ ಶತಮಾನಗಳ ಹಿಂದೆ ಶಿಕ್ಷಣ ಸೇವೆ ನೀಡಿದ ಇಂಥ ಶಾಲೆಗಳು ಸಮಾಜದ ಸರ್ವತೋಮುಖ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸಿವೆ . ಸಾವಿರಾರು ಸುಶಿಕ್ಷಿತ ನಾಗರಿಕರನ್ನು ಇಂಥ ಶಾಲೆಗಳು ನೀಡಿವೆ . ಸ್ಥಳೀಯರ ಬೇಡಿಕೆಯಂತೆ ನೂರಾರು ವರ್ಷ ಹಳೆಯ ಹಾಗೂ ತೀರಾ ಶಿಥಿಲ ಸ್ಥಿತಿಯಲ್ಲಿದ್ದ ಇಲ್ಲಿನ ತರಗತಿ ಕೊಠಡಿಗಳನ್ನು ಬದಲಿಸಿ ನೂತನವಾಗಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ . ಇದರಿಂದ ಗ್ರಾಮದ ಜನರ ಶೈಕ್ಷಣಿಕ ಅಗತ್ಯತೆ ಪೂರ್ಣಗೊಳ್ಳುತ್ತದೆ ಎಂದರು . ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗಿರಿಯಾ ಗೌಡ ಅಧ್ಯಕ್ಷತೆ ವಹಿಸಿದ್ದರು . ಉಪಾಧ್ಯಕ್ಷ ಗೋಪಿ ಗೌಡ , ಸದಸ್ಯ ರವಿ ಹೆಗಡೆ , ತೆ . ಸುಬ್ರಹ್ಮಣ್ಯ ಭಟ್ಟ , ಕಮಲಾ ಮುಕ್ರಿ , ಬಿಇಒ ಆರ್ . ಎಲ್ . ಭಟ್ಟ ಸಿಡಿಪಿಒ ನಾಗರತ್ನಾ ನಾಯಕ , ಬಿಆರ್ಸಿ ರೇಖಾ ನಾಯ್ಕ ತೆ , ಮುಖ್ಯ ಶಿಕ್ಷಕಿ ಮಂಗಲಾ ಹೆಗಡೆ ಇತರರಿದ್ದರು .
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!