May 14, 2024

Bhavana Tv

Its Your Channel

ರಸ್ತೆ ದುರಂತಕ್ಕೆ ಶಾಸಕರೆ ಕಾರಣ-ಸೂರಜ ನಾಯ್ಕ

ಕುಮಟಾ ಪಟ್ಟಣದ ಹೊನ್ಮಾವ್ ಬಳಿ ಅನಿಲ ಟ್ಯಾಂಕರ್ ಪಲ್ಟಿಯಾದ ಸಂದರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಸೂರಜ ನಾಯ್ಕ ಮಾತನಾಡಿ ಈ ದುರಂತಕ್ಕೆ ಶಾಸಕರೆ ಕಾರಣ ಎಂದು ಆರೋಪಿಸಿದ್ದಾರೆ.

ಟೋಲ್ ನಾಕಾ ಆರಂಭವಾಗಿ ಒಂದುವರೆ ವರ್ಷ ಕಳೆದರೂ ಹೆದ್ದಾರಿ ಕಾಮಗಾರಿ ಮುಗಿದಿಲ್ಲ, ಟೋಲ್ ನಾಖಾ ಆರಂಭವಾಗಿದ್ದರಿAದ ರಸ್ತೆ ಸರಿ ಇರಬಹುದು ಎಂದು ವಾಹನ ಚಾಲಕರು ವಾಹನ ಚಲಾಯಿಸುವುದರಿಂದ ಇಂತಹ ದುರ್ಘಟನೆ ನಡೆಯುತ್ತದೆ,ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದಿದ್ದರು. ಈ ಕುರಿತು ಬಿಜೆಪಿ ಮಂಡಲಾಧ್ಯಕ್ಷ ಹೇಮಂತ ಗಾಂವ್ಕರ ಸುದ್ದಿಗೋಷ್ಟಿ ನಡೆಸಿ ಸೂರಜ ನಾಯ್ಕ ಹೇಳಿಕೆಯನ್ನ ಬಲವಾಗಿ ಖಂಡಿಸಿದ್ದಾರೆ ಅಭಿವದ್ದಿ ಕಾರ್ಯದಲ್ಲಿ ಕೈ ಜೋಡಿಸುವುದನ್ನ ಬಿಟ್ಟು ಅಫಘಾತವನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮತ್ತು ಶಾಸಕರ ವಿರುದ್ದ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ , ಅಲ್ಲದೆ ಮುಂದಿನ ದಿನಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿರಲಿ ಎಂದಿದ್ದಾರೆ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿ ಸೂರಜ ಸೋನಿಯವರು ತಮ್ಮ ಬುಡವನ್ನ ಮೊದಲು ಸರಿಪಡಿಸಿಕೊಂಡು ಶಾಸಕರ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಗಜಾನನ ಗುನಗ, ವಿಶ್ವನಾಥ ನಾಯ್ಕ, ಈಶ್ವರ ಕಡ್ನೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

error: