May 16, 2024

Bhavana Tv

Its Your Channel

ಗಣರಾಜ್ಯದ ದಿನದಂದು ಉದ್ಘಾಟನೆಗೊಂಡ ಸ.ಹಿ.ಪ್ರಾ ಶಿರಗುಂಜಿ ಶಾಲೆಯ ಮಹಾದ್ವಾರ

ಕುಮಟಾ: ಗಣರಾಜ್ಯದ ದಿನದಂದು ಉದ್ಘಾಟನೆಗೊಂಡ ಸ.ಹಿ.ಪ್ರಾ ಶಾಲೆ ಶಿರಗುಂಜಿಯ ಮಹಾದ್ವಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಲಕ್ಷಿö್ಮ ಎಮ್ ಪಾಟೀಲ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.

ಮಹಾದ್ವಾರವನ್ನು ಹಳೆಯ ವಿದ್ಯಾರ್ಥಿ ಸಂಘದವರು ಹಾಗೂ ಶಿಕ್ಷಕರ ಸಹಯೋಗದೊಂದಿಗೆ ಸುಮಾರು 1,50,000-00 ಲಕ್ಷ ರೂ ವೆಚ್ಚದಲ್ಲಿ ಕಟ್ಟಿಸಿ ಗಣರಾಜ್ಯೋತ್ಸವದಂದು ಲೋಕಾರ್ಪಣೆಗೊಂಡಿತು.

ಈ ಕಾರ್ಯಕ್ರಮದಲ್ಲಿ ವಾಸರೆ ಪಂಚಾಯತ ಉಪಾಧ್ಯಕ್ಷರು,ಪಂಚಾಯತ ಸದಸ್ಯರು, ಶಿಕ್ಷಕ ಸಂಘದ ಅಧ್ಯಕ್ಷರಾದ ಜಗದೀಶ ನಾಯಕ, ಸಿ ಆರ್ ಪಿ ಗಳಾದ ಬಿ ಎಸ್ ಗೌಡ , ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು, ಅಧ್ಯಕ್ಷರು, ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕರು ಊರ ನಾಗರಿಕರು ಭಾಗಿಯಾಗಿದ್ದರು.

error: