May 17, 2024

Bhavana Tv

Its Your Channel

ಸಚಿವರಾದ ಶಿವರಾಮ ಹೆಬ್ಬಾರವರಿಗೆ ಯಲ್ಲಾಪುರದಲ್ಲಿ ಭವ್ಯ ಸ್ವಾಗತ

ಯಲ್ಲಾಪುರ : ಮಾನ್ಯ ಸಚಿವರಾದ ಶಿವರಾಮ ಹೆಬ್ಬಾರ ಅವರು ಸಚಿವರಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ವತಿಯಿಂದ ರವೀಂದ್ರ ನಗರದಲ್ಲಿ ಸಚಿವರನ್ನು ಸ್ವಾಗತಿಸಲಾಯಿತು.
ಯಲ್ಲಾಪುರ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್. ಗಾಂವ್ಕರರವರು ಪಕ್ಷದ ಕಾರ್ಯಕರ್ತ ಪರವಾಗಿ ಸಚಿವರು ಸನ್ಮಾನಿಸಿ ನಗರಕ್ಕೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಜಿ ಗಾಂವ್ಕರ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ, ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ ಯಲ್ಲಾಪುರಕರ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸೋಮೇಶ್ವರ ನಾಯ್ಕ ಹಾಗೂ ಪ್ರಮುಖರಾದ ಸುಜು ಮರಾಠಿ, ವಿನಾಯಕ ಬೋವಿವಡ್ಡರ, ಜಗದೀಶ ಪೂಜಾರಿ, ಸುಧೀರ ಆಚಾರಿ ಹಾಗೂ ಉಮೇಶ ನಾಯ್ಡು ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: