May 16, 2024

Bhavana Tv

Its Your Channel

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀ ಗಣಪತಿ ಸಿದ್ದಿ ಯವರಿಗೆ ಕೆ.ಜೆ.ಯು ವತಿಯಿಂದ ಗೌರವ ಸನ್ಮಾನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಸೂಲಗಿತ್ತಿ ಕಾಯಕ ಮತ್ತು ನಾಟಿ ವೈಧ್ಯ ಸೇವೆ ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿದ್ದು ತಾಲೂಕಿಗೆ ಹೆಮ್ಮೆ ತಂದಿದೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ ಯಲ್ಲಾಪುರ ಘಟಕದವತಿಯಿಂದ ಮಾಗೋಡಿನ ದರ್ಬೆತಗ್ಗು ಗ್ರಾಮದ ಲಕ್ಷ್ಮೀ ಗಣಪತಿ ಸಿದ್ದಿ ಯವರ ಸ್ವಗೃಹಕ್ಕೆ ತೆರಳಿ ಮೈಸೂರು ಪೇಟ ತೊಡಿಸಿ ಶಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಜೆ.ಯು ಅಧ್ಯಕ್ಷ ಶಂಕರ ಭಟ್ಟ ತಾರಿಮಕ್ಕಿ, ರಾಜ್ಯ ಘಟಕದ ಸದಸ್ಯ ನಾಗರಾಜ್ ಮದ್ಗುಣಿ, ಖಜಾಂಚಿ ಸತೀಶ ನಾಯ್ಕ, ಕಾರ್ಯದರ್ಶಿ ಕೇಬಲ್ ನಾಗೇಶ್ ಉಪಸ್ಥಿತರಿದ್ದರು.

error: