May 18, 2024

Bhavana Tv

Its Your Channel

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಯಲ್ಲಾಪುರ ತಾಲೂಕು ಕಾಂಗ್ರೆಸ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಹಾಗೂ ಸಂಘಟನೆ ಸಭೆ ನಡೆಯಿತು ,ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರುಗಳು ಕೆಪಿಸಿಸಿ ಸದಸ್ಯರು ಹಾಗು ಯಲ್ಲಾಪುರ ಕ್ಷೇತ್ರ ಉಸ್ತುವಾರಿಗಳಾದ ಪ್ರಶಾಂತ ದೇಶಪಾಂಡೆಯವರ ಸಮ್ಮುಖದಲ್ಲಿ ಕಾಂಗ್ರೆಸ ಪಕ್ಷ ಸೇರ್ಪಡೆಗೊಂಡರು ಇವರಲ್ಲಿ ಪ್ರಮುಖರಾದ ಬಿಜೆಪಿಯ ನಾಗೇಂದ್ರ ಹರಿಗದ್ದೆ, ಜೆಡಿಎಸ ತಾ ಮುಖಂಡರು, ಪಟ್ಟಣ ಪಂಚಾಯತ ಮಾಜಿ ಸದಸ್ಯರಾದ ರವಿಚಂದ್ರನ ನಾಯ್ಕ, ಉಮ್ಮಚಗಿ ಹಾಗೂ ಕುಂದರಗಿ ಪಂಚಾಯತದ ಶಶಿಧರ ಸಿದ್ದಿ ,ರವಿ ಮಂಜುನಾಥ ನಾಯ್ಕ, ಕುಮಾರ ನಾಯ್ಕ ,ನಟರಾಜ ನಾಯ್ಕ ,ಸತೀಶ ಸಿದ್ದಿ,ದರ್ಶನ ಪಿ ನಾಯ್ಕ, ಶೇಬಾಜ್ ಖಾನ, ತಿರುಮಲೇಶ ಸಿ ಮರಾಠಿ, ಕಮಲೇಶ ಸಿದ್ದಿ ,ಜಾಕಿರ್ ಹುಸೇನ ಮಾಲ್ದಾರ ತಬಸ್ಸುಮ ಮಾಲ್ದಾರ ಸೇರ್ಪಡೆಗೊಂಡರು. ಪ್ರಶಾಂತ ದೇಶಪಾಂಡೆಯವರು ಶಾಲುಹೊದಿಸಿ ಗೌರವದಿಂದ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ ಅಧ್ಯಕ್ಷರಾದ ಡಿ ಎನ್ ಗಾಂವ್ಕರ, ಜಿಲ್ಲಾ ವಕ್ತಾರರಾದ ದೀಪಕ ದೊಡ್ಡರು , ಎನ್ ಕೆ ಭಟ್ಟ ಮೇಣಸುಪಾಲ , ಟಿ ಸಿ ಗಾವ್ಕರ್ ಬ್ಲಾಕಿನ ಪದಾಧಿಕಾರಿಗಳು ವಿವಿಧ ಶೆಲ್ ಅಧ್ಯಕ್ಷರುಗಳು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: