May 14, 2024

Bhavana Tv

Its Your Channel

ಯೋಗಿ ಟಾಪ್ಪರ್ಸ ಪಾಯಿಂಟ ವತಿಯಿಂದ ನವೋದಯ ಪರೀಕ್ಷೆ ಗೆ ಕುಳಿತ 5 ವಿದ್ಯಾರ್ಥಿಗಳು ಆಯ್ಕೆ

ವರದಿ:- ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮಳಗಿಯಲ್ಲಿರುವ ನವೋದಯ ಶಾಲೆಗೆ ನಗರದಲ್ಲಿರುವ “ಯೋಗೀಶ ಶಾನಭಾಗ”ರವರ ಯೋಗಿ ಟಾಪ್ಪರ್ಸ ಪಾಯಿಂಟ ವತಿಯಿಂದ ಪರೀಕ್ಷೆ ಗೆ ಕುಳಿತ 5 ಜನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಯಲ್ಲಾಪುರದಲ್ಲಿ ಪ್ರಥಮ ಬಾರಿಗೆ ಯೋಗೀಶ್ ಶಾನಭಾಗರ ಪ್ರಯತ್ನದಿಂದಾಗಿ ಇಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ದಾಖಲೆ.ಕಳೆದ ಸಲವೂ ಎರಡು ವಿಧ್ಯಾರ್ಥಿಗಳು ನವೋದಯಕ್ಕೆ ಆಯ್ಕೆಯಾಗಿದ್ದರು.ಅತಿ ಕಡಿಮೆ ದರದಲ್ಲಿ ವಿಧ್ಯಾರ್ಥಿಗಳಿಗೆ ಟ್ಯೂಶನ್ ನೀಡುವದರಿಂದ ಬಡ ಮಕ್ಕಳಿಗೆ ಇದರಿಂದ ಅನುಕೂಲ ವಾಗುವುದು. ಈ ಬಗ್ಗೆ ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ವಿಶ್ರಾಂತ ಪ್ರಾಂಶುಪಾಲರಾದ ಬೀರಣ್ಣ ನಾಯ್ಕ ಮೊಗಟಾ ಆಯ್ಕೆಯಾದ ಮಕ್ಕಳನ್ನು ಅಭಿನಂದಿಸಿದ್ದಾರೆ.

error: