May 1, 2024

Bhavana Tv

Its Your Channel

ಜಡಿ ಬೂಟಿ ದಿವಸ್ ಗಿಡಮೂಲಿಕ ದಿನಾಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಪತಂಜಲಿ ಯೋಗ ಪೀಠದ ಪೂಜ್ಯ ಆಚಾರ್ಯ ಬಾಲಕೃಷ್ಣ ಜಿ ಅವರ ಜನ್ಮದಿನವನ್ನು ದೇಶಾದ್ಯಂತ ಜಡಿಬೂಟಿ ದಿವಸ್ ಆಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ವಿವಿಧ ಗಿಡಗಳನ್ನು ನೆಟ್ಟು ಔಷಧಿ ಸಸ್ಯಗಳ ವಿತರಣೆ ಕಾರ್ಯಕ್ರಮವನ್ನು ಎಪಿಎಂಸಿ ಆವಾರ ಇಲ್ಲಿ ಇಂದು ಮುಂಜಾನೆ ಹಮ್ಮಿಕೊಳ್ಳಲಾಯಿತು.

ಪತಂಜಲಿಯ ಜಿಲ್ಲಾ ಸಮಿತಿ ಸದಸ್ಯ ಜಿಎಸ್ ಭಟ್ ಹಳವಳ್ಳಿ ಮಾತನಾಡಿ ಮನುಷ್ಯನ ಆರೋಗ್ಯಕ್ಕೆ ಗಿಡಮೂಲಿಕೆಗಳು ಇನ್ನಿಲ್ಲದ ಕೊಡುಗೆ ನೀಡಿವೆ ಗಿಡಮೂಲಿಕೆಗಳನ್ನು ಹೆಚ್ಚು ಹೆಚ್ಚು ನೆಟ್ಟು ಸಂರಕ್ಷಣೆ ಮಾಡುವ ಮೂಲಕ ನಾವು ಜಡಿಬೂಟಿ ದಿವಸ್ ಕಾರ್ಯಕ್ರಮವನ್ನು ಸಾರ್ಥಕ ಗೊಳಿಸಬೇಕಿದೆ ಎಂದರು

ಈ ಸಂದರ್ಭದಲ್ಲಿ ಆಚಾರ್ಯ ಬಾಲಕೃಷ್ಣ ಜಿ ಅವರ ಜೀವನ ಗಾಥೆಯ ಬಗ್ಗೆ ಮಾಹಿತಿ ನೀಡಿ ಅವರಿಂದ ಭಾರತೀಯ ಗಿಡಮೂಲಿಕ ಇತಿಹಾಸದಲ್ಲಿ ಮಹತ್ತರ ಬದಲಾವಣೆಗಳಾಗಿವೆ ಎಂದು ಸ್ಮರಿಸಲಾಯಿತು. ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿಕೆ ಭಟ್ಟ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ ವಿ ಹೆಗಡೆ, ಜಿಲ್ಲಾ ಯುವ ಪ್ರಭಾರಿ ಶಿಕ್ಷಕ ದಿವಾಕರ ಮರಾಠಿ, ಸಹ ಪ್ರಭಾರಿ ಕನಕಪ್ಪ, ಯೋಗ ವಿಸ್ತಾರಕ ಶಿಕ್ಷಕ ಸುಬ್ರಾಯ ಭಟ್ಟ, ಉಪಾಧ್ಯಕ್ಷ ನಾಗೇಶ ರಾಯ್ಕರ, ಕಾರ್ಯದರ್ಶಿ ಸತೀಶ್ ಹೆಗಡೆ, ಗಂಗಾ ವಿ ಭಟ್ಟ ಕಾವೇರಿ ಹೆಗಡೆ ವೀಣಾ ರಾಯ್ಕರ್ ಮುಂತಾದವರಿದ್ದರು.

error: