May 2, 2024

Bhavana Tv

Its Your Channel

ಯಲ್ಲಾಪುರ ಪತಂಜಲಿಯಿoದ ಬಲಿದಾನ ದಿವಸ್ ಆಚರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಭಾರತ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೋರಾಡಿ ಬಲಿದಾನಗೈದ ಭಾರತಮಾತೆಯ ವೀರ ಪುತ್ರರಾದ ಭಗತ್ ಸಿಂಗ್ ಸುಖದೇವ್ ಮತ್ತು ರಾಜಗುರು ಅವರ ಬಲಿದಾನದ ಸ್ಮರಣೆಗಾಗಿ ಬಲಿದಾನ ದಿವಸ್ ಕಾರ್ಯಕ್ರಮವನ್ನು ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು ಮುಂಜಾನೆ ಯೋಗ ತರಗತಿ ಅಗ್ನಿಹೋತ್ರ ಹಾಗೂ ಭಗತ್ ಸಿಂಗ್ ಸುಖದೇವ ರಾಜಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಅವರ ಬಲಿದಾನದ ಪ್ರೇರಣೆಯಿಂದ ಸಕಲರಲ್ಲಿಯೂ ದೇಶ ಸೇವೆಗಾಗಿ ಅದಮ್ಯ ಚೈತನ್ಯ ಶಕ್ತಿ ತುಂಬಿ ಬರಲಿ ಎಂದು ಪ್ರಾರ್ಥಿಸಲಾಯಿತು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ಆರ್ ವಿ ಹೆಗಡೆ, ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ವಿ.ಕೆ. ಭಟ್ಟ ಉಪಾಧ್ಯಕ್ಷ ನಾಗೇಶ ರಾಯ್ಕರ ಪತಂಜಲಿ ಯುವ ಭಾರತ ಜಿಲ್ಲಾ ಪ್ರಭಾರಿ ದಿವಾಕರ ಮರಾಠಿ, ಜಿಲ್ಲಾ ಸಮಿತಿಯ ಸದಸ್ಯ ಜಿಎಸ್ ಭಟ್ಟ, ಜಿಲ್ಲಾ ಯೋಗ ವಿಸ್ತಾರಕ ಸುಬ್ರಾಯ ಭಟ್ಟ, ಜಿಲ್ಲಾ ಯುವ ಸಹ ಪ್ರಭಾರಿ ಕನಕಪ್ಪ, ಎಸ್,ಡಿ ನಾಯ್ಕ, ಗಂಗಾ ವಿ. ಭಟ್ಟ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

error: