April 27, 2024

Bhavana Tv

Its Your Channel

ಜಿಲ್ಲೆಗೆ ಕಾಡುತ್ತಿದೆ ಮುಂಬೈ ನಂಟು; ಒಂದೇ ದಿನ ಆರು ಮಂದಿಗೆ ಸೋಂಕು ದೃಡ

ಕಾರವಾರ: ಜಿಲ್ಲೆಯಲ್ಲಿ ಕರೋನಾ ಅಬ್ಬರ ಇಂದು ಮುಂದುವರೆದಿದ್ದು ಬುಧವಾರ ಮಧ್ಯಾಹ್ನದಲ್ಲೆ ಆರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಚಿತಪಡಿಸಿದೆ.
ಜಿಲ್ಲೆಯಲ್ಲಿ ಇಂದು ಸಿದ್ದಾಪುರಕ್ಕೂ ಎಂಟ್ರಿ ನೀಡಿದ್ದುಂ ತಾಲೂಕಿನ ೫೨ ವರ್ಷದ ವ್ಯಕ್ತಿಗೆ, ಹೊನ್ನಾವರದ ೨೪ ವರ್ಷದ ಯುವಕನಿಗೆ, ಯಲ್ಲಾಪುರದ ೪, ೯ ವರ್ಷದ ಮಕ್ಕಳಿಗೆ, ೧೨ ವರ್ಷದ ಯುವತಿ ಹಾಗೂ ೨೬ ವರ್ಷದ ಯುವಕನಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರು ಒಂದು ವಾರದ ಹಿಂದೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇದೀಗ ಸಿದ್ದಾಪುರ ಮೂಲದ ವ್ಯಕ್ತಿಯಲ್ಲೂ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಸೋಂಕಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಅಂಕೋಲಾ, ಹಳಿಯಾಳ ಹೊರತುಪಡಿಸಿ ಜಿಲ್ಲೆಯ ೧೦ ತಾಲೂಕುಗಳಲ್ಲೂ ಸೋಂಕಿತರು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು ೭೫ ಮಂದಿ ಸೋಂಕಿತರಿದ್ದು, ೩೭ ಮಂದಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿ ೩೮ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

error: