ಭಟ್ಕಳ ; ಭಟ್ಕಳದ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೂರು ಪಾತಿದೋಣಿಗಳು ಕಡಲಿನ ಅಬ್ಬರಕ್ಕೆ ಮುಳುಗಿದ ಘಟನೆ ಭಾನುವಾರ ನಡೆದಿದೆ.
ಭಟ್ಕಳದ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೂರು ಪಾತಿದೋಣಿಗಳು ಕಡಲಿನ ಅಬ್ಬರಕ್ಕೆ ಮುಳುಗಿದ ಘಟನೆ ಭಾನುವಾರ ನಡೆದಿದೆ.
ಘಟನೆಯಲ್ಲಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಬಂದರು ಪ್ರದೇಶದ ಅಳಿವೆಯಲ್ಲಿ ಅಲೆಗಳ ಅಬ್ಬರ ಏಕಾಏಕಿ ಹೆಚ್ಚಾಗಿದ್ದರಿಂದ ಅಲೆಗಳ ಹೊಡೆತಕ್ಕೆ ಸಿಕ್ಕು ಮೂರು ಪಾತಿದೋಣಿಗಳು ಮುಳುಗಿವೆ.
ಎರಡು ಪಾತಿದೋಣಿಯಲ್ಲಿದ್ದ ಮೀನುಗಾರರು ನೀರಿನಲ್ಲೇ ಸಾಹಸ ಮಾಡಿ ದೋಣಿ ಏರಿ ಅಪಾಯದಿಂದ ಪಾರಾದರೆ ಒಬ್ಬರ ದೋಣಿ ನೀರಿನ ರಭಸಕ್ಕೆ ಸಿಕ್ಕಿ ಮುಂಡಳ್ಳಿ ಕಡಲತೀರಕ್ಕೆ ಬಂದು ಅಪ್ಪಳಿಸಿದೆ.
ದೋಣಿ ಮುಳುಗಿದ ಸ್ಥಳ ಕಲ್ಲಿನ ಪ್ರದೇಶವಾಗಿದ್ದರಿಂದ ಮೀನುಗಾರರೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಲೆ ಮತ್ತು ದೋಣಿಗೆ ಹಾನಿಯಾಗಿದೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.