ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 49 ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 646ಕ್ಕೆ ಏರಿದೆ.
ಭಟ್ಕಳದಲ್ಲಿ 20, ಹಳಿಯಾಳದಲ್ಲಿ 6, ಹೊನ್ನಾವರದಲ್ಲಿ 4, ಕಾರವಾರದಲ್ಲಿ 2, ಕುಮಟಾದಲ್ಲಿ 14, ಶಿರಸಿಯಲ್ಲಿ 1 ಹಾಗೂ ಯಲ್ಲಾಪುರದಲ್ಲಿ 2 ಪ್ರಕರಣ ದೃಢಪಟ್ಟಿದೆ.
ಹೊನ್ನಾವರದಲ್ಲಿಂದು ೪ ಪ್ರಕರಣಗಳು ದಾಖಲಾಗಿದ್ದು ಮಾಳಕೋಡ ಮತ್ತು ಅನಂತವಾಡಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಮಹಾರಾಷ್ಟ್ರದಿಂದ ಆಗಮಿಸಿ ಹೋಮ್ಕ್ವಾರಂಟೈನ್ನಲ್ಲಿದ್ದ ಅನಂತವಾಡಿಯ 26 ವರ್ಷದ ಯುವಕನಲ್ಲಿ ಮತ್ತು ಆಂಧ್ರಪ್ರದೇಶದಿಂದ ಆಗಮಿಸಿ, ಖಾಸಗಿ ಹೊಟೆಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದ ಮಾಳಕೋಡ ಮೂಲದ 19 ವರ್ಷದ ಯುವಕನಲ್ಲಿ ಕೊರೊನಾ ದೃಢಪಟ್ಟಿದೆ.ಅಲ್ಲದೇ ಹಳದೀಪುರದ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 55 ವರ್ಷದ ಹೋಮ್ ಕ್ವಾರಂಟೈನ್ ಮಹಿಳೆಗೆ ಸೊಂಕು ದೃಡವಾಗಿದೆ. ದುಬೈನಿಂದ ಆಗಮಿಸಿ ಹೊಟೇಲ್ ಕ್ವಾರಂಟೈನಲ್ಲಿದ್ದ ೪೪ ವರ್ಷದ ಪುರುಷನಲ್ಲಿ ಸೊಂಕು ಪತ್ತೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ 254 ಮಂದಿ ಗುಣಮುಖರಾಗಿದ್ದು, 374 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಐವರು ಸಾವನ್ನಪ್ಪಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.