May 15, 2024

Bhavana Tv

Its Your Channel

ಓಮಾನ್‍ನಿಂದ ಮಂಗಳೂರಿಗೆ ಬಂದು ಭಟ್ಕಳ ಸೇರಿದ 60 ಪ್ರಯಾಣಿಕರು

ಭಟ್ಕಳ: ಕಳೆದ ಜುಲೈ 11ರಂದು ಓಮಾನ್‍ನಿಂದ ಮಂಗಳೂರಿಗೆ ಬಂದು ಮಂಗಳೂರಿನಲ್ಲಿಯೇ 7 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದ ಒಟ್ಟೂ 60 ಜನರು ಎರಡು ಬಸ್ಸುಗಳಲ್ಲಿ ಶನಿವಾರ ಬೆಳಿಗ್ಗೆ ಭಟ್ಕಳಕ್ಕೆ ಬಂದಿದ್ದು ಅವರೆಲ್ಲರನ್ನು ಕೂಡಾ ಇಲ್ಲಿನ ಅಂಜುಮಾನ್ ಹಾಸ್ಟೇಲ್‍ನಲ್ಲಿ ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

ಈಗಾಗಲೇ ಮಂಗಳೂರಿನಲ್ಲಿ ಒಂದು ವಾರ ಇದ್ದ ಅವರ ಗಂಟಲದ್ರವ ಪರೀಕ್ಷೆ ಮಾಡದೇ ಇರುವ ಕಾರಣ ಉತ್ತರ ಕನ್ನಡ ಜಿಲ್ಲಾಡಳಿತ ಅವರ ಗಂಟಲ ದ್ರವ ಪರೀಕ್ಷೆ ಮಾಡಿ ಅವರ ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಲ್ಲಿಯ ತನಕ ಅವರು ಕ್ವಾರಂಟೈನ್‍ನಲ್ಲಿರುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿದೆ

error: