April 29, 2024

Bhavana Tv

Its Your Channel

ಬಹು ವರ್ಷದ ಕಾರ್ಮಿಕ ಇಲಾಖೆಯ ಸಮಸ್ಯೆಗೆ ಪರಿಹಾರ ಒದಗಿಸಿದ ಶಾಸಕ ಸುನೀಲ ನಾಯ್ಕ.

ಭಟ್ಕಳ: ತಾಲೂಕಿನ ಬಹುವರ್ಷದ ಸಮಸ್ಯೆಗೆ ಇದೀಗ ಮುಕ್ತಿ ದೊರೆತಿದ್ದು, ಸಮಸ್ಯೆ ಗಮನಕ್ಕೆ ಬಂದಾಕ್ಷಣ ಬಗೆಹರಿಸಿದ್ದಾರೆ.
ಭಟ್ಕಳ ತಾಲೂಕಿನಲ್ಲಿ ಸರಿಸುಮಾರು ೨೦ ಸಾವಿರ ಕಾರ್ಮಿಕರು ನೊಂದಣಿ ಮಾಡಿಕೊಂಡಿದ್ದು, ಇನ್ನೂ ೩೦ ಸಾವಿರಕ್ಕೂ ಅಧಿಕ ಕಾರ್ಮಿಕರು ನೊಂದಣಿ ಮಾಡಿಕೊಳ್ಳಲಿದ್ದಾರೆ, ಕಳೆದ ನಾಲ್ಕೈದು ವರ್ಷಗಳಿಂದ ಸರ್ಕಾರ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಪಡೆಯಲು ನೀಡಿದ ಹಲವಾರು ಅರ್ಜಿಗಳು ವಿಲೇವಾರಿ ಆಗದೇ ಕಛೇರಿಯಲ್ಲೇ ಉಳಿದಿದ್ದು, ಇನ್ನೂ ಮುಂದೆ ಯಾವ ಕಾರ್ಮಿಕರ ಅರ್ಜಿಗಳು ಭಟ್ಕಳ ಕಾರ್ಮಿಕ ಇಲಾಖೆಯಲ್ಲಿ ಧೂಳು ತಿನ್ನಬಾರದು ಎಂಬ ಉದ್ದೇಶದಿಂದ ಭಟ್ಕಳ ಕಾರ್ಮಿಕ ಇಲಾಖೆಗೆ ಪ್ರತಿ ವಾರದಲ್ಲಿ ಮೂರು ದಿನಕ್ಕೆ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಎಂದು ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಅಧಿಕಾರಿಗಳಿಗೆ ಖಡಕ್ ಆದೇಶ ಜಾರಿ ಮಾಡಿದ್ದಾರೆ. ಇದರಿಂದ ಕಾರ್ಮಿಕ ಇಲಾಖೆಯ ನೊಂದಾವಣೆ ವಿಳಂಬ ಕೊನೆಯಾಗಲಿದೆ.

error: