May 18, 2024

Bhavana Tv

Its Your Channel

ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ನೂತನ ವಿ.ಪ ಸದಸ್ಯ ಶಾಂತಾರಾಮ ಸಿದ್ದಿ ಮನೆ ಮನೆಗೆ ಭೇಟಿ.

ಯಲ್ಲಾಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಮಂಗಳವಾರ ತಾಲೂಕಿನ ಹಿತ್ಲಳ್ಳಿಯಲ್ಲಿರುವ ನೂತನ ವಿ.ಪ ಸದಸ್ಯ ಶಾಂತಾರಾಮ ಸಿದ್ದಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವನದಲ್ಲಿ ವಾಸವಾಗಿರುವ ವನವನ್ನೇ ಜೀವನವನ್ನಾಗಿಸಿಕೊಂಡಿರುವ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಶಾಂತಾರಾಮ ಸಿದ್ದಿಯವರು ಅಕ್ಷರವನ್ನೇ ಕಾಣದ ಸಮುದಾಯಕ್ಕೆ ಅಕ್ಷರದ ಬೆಳಕಾಗಿ ಕೆಲಸ ಮಾಡಿಕೊಂಡು ಬಂದವರು, ಈ ದೇಶದಲ್ಲಿರುವ ವನವಾಸಿಗಳಿಗೆ ಹತ್ತಾರು ಬುಡಕಟ್ಟು ಜನಾಂಗಳಿಗೆ ಅಲ್ಲಿರತಕ್ಕ ಸಮಸ್ಯೆಗಳನ್ನು ಪರಿಷತ್ ಮೂಲಕ ಅವರ ಧ್ವನಿಗಳ ಚಿಂತನೆಗೆ ಶಕ್ತಿತುಂಬಿ ನಿವಾರಣೆ ಮಾಡುವ ಕಾರ್ಯ ಅವರಿಂದಾಗಲಿ ಎಂದರು. ಮಾತನಾಡಿದರು.

ಹಿಂದಿನ ಸರಕಾರದಿಂದ, ಸಾಮಾಜಿಕವಾಗಿ ನಿರ್ಲಕ್ಷಿತಕ್ಕೊಳಗಾಗಿದ್ದ ಈ ಸಮುದಾಯಕ್ಕೆ ಒಂದು ಸ್ವರ ಬೇಕಿತ್ತು. ಆರ್ ಎಸ್ ಎಸ್ ಮುಖಾಂತರ ಕಾರ್ಯವನ್ನು ವಿಸ್ತಾರ ಮಾಡಿ ರಾಷ್ಟ್ರಕಾರಣ ಜೊತೆಗೆ ಸಮಾಜ ಕಾರ್ಯ ಮಾಡುತ್ತಾಸಂಘ ಹೇಳಿಕೊಟ್ಟಿರುವ ದಾರಿಯಲ್ಲಿ ವನವಾಸಿ ಕಲ್ಯಾಣ ಮುಖಾಂತರವಾಗಿ ಬುಡಕಟ್ಟು ಸಮುದಾಯಗಳಿಗೆ ರಾಷ್ಟ್ರ ಪರಿಚಯ ವನ್ನು ಮಾಡಿಕೊಟ್ಟು ಸೇವಾಕಾರ್ಯ ಮಾಡುತ್ತಿರುವ ಶಾಂತರಾಮ ಸಿದ್ದಿಯವರನ್ನು ಬಿಜೆಪಿ ಬುಡಕಟ್ಟು ಸಮುದಾಯಕ್ಕೆ ಶಕ್ತಿ ತುಂಬಲು ಅವರ ಸ್ವರ ,ದ್ವನಿಯ ಚಿಂತನೆಗಳನ್ನು ವಿಧಾನ ಪರಿಷತ್‌ನಲ್ಲಿ ನೇತೃತ್ವವಹಿಸುವ ಶಕ್ತಿಬೇಕು ಎನ್ನುವದಕ್ಕೋಸ್ಕರ ಆವರನ್ನು ವಿಪಗೆ ಆಯ್ಕೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಜೀ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ತಾಲೂಕಾದ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಕಾರ್ಯದರ್ಶೀ ರವಿಭಟ್ಟ ಬರಗದ್ದೆ,ವನವಾಸಿ ಕಲ್ಯಾಣ ಪ್ರಮುಖರಾದ ದೊಂಡುಪಾಟೀಲ, ಪ.ಪಂ ಸದಸ್ಯರಾದ ಸೋಮೇಶ್ವರ ನಾಯ್ಕ, ಸತೀಶ ನಾಯ್ಕ, ಜಿಪಂ ಸದಸ್ಯೆ ರೂಪಾ ಬೂರ‍್ಮನೆ, ರೇಖಾಹೆಗಡೆ ,ಮುಂತಾದವರಿದ್ದರು.

error: